Advertisement

ಸಿಎಎ ಕಾಯ್ದೆ ಎಫೆಕ್ಟ್: ಬಾಂಗ್ಲಾ-ಭಾರತ ಗಡಿಭಾಗದಲ್ಲಿ ಮೊಬೈಲ್, ದೂರಸಂಪರ್ಕ ಸೇವೆ ಸ್ಥಗಿತ

09:45 AM Jan 01, 2020 | Nagendra Trasi |

ಢಾಕಾ: ಭದ್ರತೆಯ ಕಾರಣದ ಹಿನ್ನೆಲೆಯಲ್ಲಿ ಭಾರತದ ಗಡಿಭಾಗದಲ್ಲಿ ಮೊಬೈಲ್ ಹಾಗೂ ಟೆಲಿಫೋನ್ ಸೇವೆಯನ್ನು ಸ್ಥಗಿತಗೊಳಿಸುವಂತೆ ಬಾಂಗ್ಲಾದೇಶದ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ ಟೆಲಿಕಾಂ ಆಪರೇಟರ್ಸ್ ಗೆ ಆದೇಶ ನೀಡಿದೆ ಎಂದು ಪ್ರಕಟಣೆ ತಿಳಿಸಿದೆ.

Advertisement

ಪ್ರಸ್ತುತ ದೇಶದ ಭದ್ರತೆಯ ಹಿನ್ನೆಲೆಯಲ್ಲಿ ಭಾರತದ ಗಡಿಭಾಗದಿಂದ ಸುಮಾರು ಒಂದು ಕಿಲೋ ಮೀಟರ್ ದೂರದವರೆಗೆ ಮೊಬೈಲ್ ನೆಟ್ ವರ್ಕ್ ಅನ್ನು ಸ್ಥಗಿತಗೊಳಿಸುವಂತೆ ಬಾಂಗ್ಲಾದೇಶದ ಅಧಿಕಾರಿಗಳು ಸೂಚಿಸಿರುವುದಾಗಿ ಸೋಮವಾರ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ಹೇಳಿದೆ.

ಹೆಸರು ಹೇಳಲು ಇಚ್ಛಿಸದ ಅಧಿಕಾರಿಯೊಬ್ಬರ ಮಾಹಿತಿ ಪ್ರಕಾರ, ಹೊಸ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಭಾರತದಲ್ಲಿ ಜಾರಿಗೆ ತಂದ ನಂತರ ಹಿಂಸಾಚಾರ, ಪ್ರತಿಭಟನೆ ನಡೆಯುತ್ತಿದೆ. ಈ ನಿಟ್ಟಿನಲ್ಲಿ ಭಾರತದ ನಿರಾಶ್ರಿತ ಮುಸ್ಲಿಮರು ಬಾಂಗ್ಲಾದೇಶದ ಗಡಿ ಒಳಕ್ಕೆ ನುಸುಳಿ ಬರುವ ಸಾಧ್ಯತೆ ಇರುವ ಆತಂಕದಲ್ಲಿ ಈ ನಿರ್ಧಾರ ಕೈಗೊಂಡಿರುವುದಾಗಿ ವಿವರಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next