Advertisement

Bangladesh ಮಧ್ಯಾಂತರ ಸರಕಾರ ಹಿಂದೂಗಳ ಕಾಳಜಿ ವಹಿಸಲಿ: ಸುಬ್ರಹ್ಮಣ್ಯ ಶ್ರೀ ಆಗ್ರಹ

10:31 PM Aug 14, 2024 | Team Udayavani |

ಮಂಗಳೂರು: ಬಾಂಗ್ಲಾದೇಶದ ಮಧ್ಯಾಂತರ ಸರಕಾರದ ಮುಖ್ಯಸ್ಥರು ಅಲ್ಪಸಂಖ್ಯಾಕ ಹಿಂದೂಗಳ ಬಗ್ಗೆ ಕಾಳಜಿ ವಹಿಸಬೇಕು. ಭಾರತ ಸರಕಾರವೂ ಹಿಂದೂಗಳ ರಕ್ಷಣೆಗಾಗಿ ಅಲ್ಲಿನ ಸರಕಾರವನ್ನು ಒತ್ತಾಯಿಸಬೇಕು. ಇನ್ನೂ ಹೆಚ್ಚಿನ ಘಟನೆಗಳು ನಡೆಯುವ ಮೊದಲು ಅಲ್ಪಸಂಖ್ಯಾಕರನ್ನು ರಕ್ಷಿಸುವುದು ಎಲ್ಲರ ಕರ್ತವ್ಯ. ವಿಶ್ವಸಂಸ್ಥೆ, ಮಾನವ ಹಕ್ಕು ಆಯೋಗವೂ ಇದರ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು ಎಂದು ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಆಗ್ರಹಿಸಿದ್ದಾರೆ.

Advertisement

ಸೋಮವಾರ ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಅವರು, ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಅಲ್ಪಸಂಖ್ಯಾಕ ಹಿಂದೂಗಳ ನರಮೇಧ ದಿಗ್ಭ್ರಮೆ ಉಂಟು ಮಾಡಿದೆ. ಭಾರತ ಎಷ್ಟು ಸೌಹಾರ್ದ ದೇಶವೆಂದರೆ ಇಲ್ಲಿ ಅಲ್ಪಸಂಖ್ಯಾಕರು ನಿರ್ಭೀತಿಯಿಂದ ಬದುಕುತ್ತಾರೆ. ಆದರೆ ಪ್ರಪಂಚದ ಬೇರೆ ದೇಶಗಳಲ್ಲಿ ಅಲ್ಪಸಂಖ್ಯಾಕರಾಗಿರುವ ಹಿಂದೂಗಳ ಪರಿಸ್ಥಿತಿ ಅತ್ಯಂತ ಭಯಾನಕವಾಗಿದೆ. ದೇವಸ್ಥಾನಗಳ ಲೂಟಿ, ಹಿಂದೂ ಹೆಣ್ಮಕ್ಕಳ ಮೇಲೆ ಅತ್ಯಾಚಾರ, ಕೊಲೆ ನಡೆಯುತ್ತಿರುವುದು ನೋವು ತಂದಿದೆ. ಈ ಕ್ರೌರ್ಯದ ಪರಾಕಾಷ್ಠೆಯಿಂದ ಅಲ್ಪಸಂಖ್ಯಾಕ ಹಿಂದೂಗಳು ಬದುಕುವುದೇ ಕಷ್ಟ ಎನ್ನುವ ಪರಿಸ್ಥಿತಿಯಲ್ಲಿ ಒದ್ದಾಡುತ್ತಿದ್ದಾರೆ. ಹಿಂದೂ ಮಂದಿಗೆ ಅಲ್ಲಿ ಬಲವಾದ ಆಶ್ರಯ ಒದಗಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next