Advertisement

ಬಂಗಾರಪೇಟೇಲಿ ಈಗಲೂ ಕಣಿ ಹೇಳ್ತಾರೆ

06:40 PM Oct 11, 2019 | Naveen |

● ಎಂ.ಸಿ.ಮಂಜುನಾಥ್‌
ಬಂಗಾರಪೇಟೆ: ಆಧುನಿಕತೆ ಮುಂದುವರಿದಂತೆ ಗ್ರಾಮೀಣ ಭಾಗದಲ್ಲಿದ್ದ ಕೆಲವು ಪದ್ಧತಿಗಳು ನಿಧನವಾಗಿ ನೇಪತ್ಯಕ್ಕೆ ಸರಿಯುತ್ತಿವೆ. ಅದರಲ್ಲಿ ಕಣಿ ಹೇಳುವ ಕೊರವಂಜಿಗಳೂ ಸೇರಿದ್ದಾರೆ. ಹಿಂದೆ ಊರೂರು ಅಲೆಯುತ್ತ, ಮನೆ ಬಾಗಿಲಿಗೇ ಹೋಗಿ ವಿಶೇಷ ವೇಷಭೂಷಣಗಳಿಂದ ಹಾಡಿನ ಮೂಲಕ ಭವಿಷ್ಯ ಹೇಳುತ್ತಿದ್ದ ಕೊರವಂಜಿಗಳು ಈಗ ಸಿಗುವುದೇ ಅಪರೂಪ. ಇಂತಹ ಕಣಿ ಹೇಳುವ ಕೊರವಂಜಿಗಳು ಪಟ್ಟಣದಲ್ಲಿ ಇದ್ದಾರೆ.

Advertisement

ಜೈನ ದೇಗುಲ ಮುಂಭಾಗ ಮಂಗಳವಾರ ಮತ್ತು ಶುಕ್ರವಾರದಂದು ಸಾಂಪ್ರದಾಯದಿಂದ ಬಂದಿರುವ ಕಣಿ ಹೇಳುವ ಕಾಯಕವನ್ನು ಮಹಿಳೆಯರಿಬ್ಬರು ವ್ಯಾಪಾರದ ಜೊತೆ ಮಾಡುತ್ತಿದ್ದಾರೆ. ಹಳ್ಳಿಗಳಿಂದ ಬರುವ ಮಹಿಳೆಯರು ನವಧಾನ್ಯ, ಎಲೆ-ಅಡಕೆ, ದಕ್ಷಿಣೆ ಕೊಟ್ಟು ಕಣಿ ಕೇಳುತ್ತಾರೆ.

ನಾಮಕರಣ ಮಾಡುವುದಕ್ಕೂ ಕಣಿ: ಹಿಂದೆ ಗ್ರಾಮೀಣ ಜನರು ಕಣಿ ಕೇಳಿ ಮಗುವಿಗೆ ನಾಮಕರಣ ಮಾಡುತ್ತಿದ್ದರು. ಆದರೆ, ಈಗ ಶಾಸ್ತ್ರೀಗಳು, ಪಂಚಾಗ ನೋಡುವವರ ಬಳಿ ಕೇಳಿ ನಾಮಕರಣ ಮಾಡುತ್ತಾರೆ. ಒಂದು ವೇಳೆ ಮಗು ಸದಾ ಆಳುತ್ತಿದ್ದರೆ, ಪಟ್ಟಣಕ್ಕೆ ಬಂದು ಈ ಕೊರವಂಜಿಗಳ ಬಳಿ ಕಣಿ ಕೇಳಿ ಮತ್ತೂಮ್ಮೆ ನಾಮಕರಣ ಮಾಡಿರುವುದು ಇದೆ.

ಮನೆಯಲ್ಲಿ ಯಾರಾದರೂ ತುಂಬಾ ದಿನಗಳಿಂದ ಮಾನಸಿಕವಾಗಿ ಬಳಲುತ್ತಿದ್ದರೆ, ಅನಾರೋಗ್ಯ ಕಾಡುತ್ತಿದ್ದರೆ, ಮನಸ್ಸಿಗೆ ನೋವಾಗಿದ್ದರೆ ಕಣಿ ಕೇಳುವುದನ್ನು ಮೆರೆತ್ತಿಲ್ಲ. ಯಾರಾದ್ರು ಕಾಣಿಕೆ ನೀಡಿ ಕಣಿ ಹೇಳಿ ಅಂದ್ರೆ, ದೇವರ ಪ್ರಾರ್ಥನೆ ಮಾಡಿ, ರಾಗಿಯಲ್ಲಿ ಬೆರೆಳಾಡಿಸುವ ಕಣಿಯಮ್ಮ, ಬೆರಳಿಗೆ ಸಿಗುವ ರಾಗಿ ಕಾಳನ್ನು ಎತ್ತಿ, ಎಷ್ಟು ಬಂದಿದೆ ಎಂದು ನೋಡಿಕೊಂಡು ಇಂತಹದ್ದೇ ದೇವರ ಪೂಜೆ ಮಾಡಿ ಎಂದು ಹೇಳುತ್ತಾರೆ.

ಒಂದು ರೋಗಿಯ ಬಗ್ಗೆ ಕೇಳಿದ್ರೆ ಅವರ ತಲೆಯ ಮೇಲೆ ಹಾಕಲು ಒಂದಿಷ್ಟು ನವಧಾನ್ಯ ಕೊಡುತ್ತಾರೆ. ಇದರಿಂದ ಎಷ್ಟೋ ಮಕ್ಕಳಿಗೆ, ಹಿರಿಯರಿಗೆ, ಮಹಿಳೆಯರಿಗೆ ಕಾಯಿಲೆ ಗುಣವಾಗಿದೆ ಎಂದು ಕೆಲವರು ಹೇಳುತ್ತಾರೆ. ಆದರೆ, ಅದು ಅವರ ನಂಬಿಕೆ.

Advertisement

ಬಂಗಾರಪೇಟೆ ತಾಲೂಕಿನ ಜನತೆ ಸಂತೆಯ ದಿನವಾದ ಶುಕ್ರವಾರ ಈಗಲೂ ಸಾಕಷ್ಟು ಮಂದಿ ಕಣಿ ಕೇಳಲು ಬರುತ್ತಾರೆ. ಗ್ರಾಮೀಣ ಮತ್ತು ಪಟ್ಟಣದ ಜನತೆ, ಪಟ್ಟಣದಲ್ಲಿ ಪಚ್ಚೆ ಸಾಮಗ್ರಿಯನ್ನು ಗಂಧಿಗೆ ಅಂಗಡಿಗಳಲ್ಲಿ ಪಡೆದು ಕಣಿಯಮ್ಮ ಹೇಳಿದಂತೆ ರೋಗಿ ಅಥವಾ ಸಮಸ್ಯೆ ಇರುವವರನ್ನು ಕರೆದುಕೊಂಡು ಹೋಗಿ ಪೂಜೆ ಸಲ್ಲಿಸಿಕೊಂಡು ಬರುವುದು ವಾಡಿಕೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next