Advertisement

Bangaluru ಓಪನ್‌ ಚಾಂಪಿಯನ್‌ಗೆ ಪುಣೆಯಲ್ಲಿ ರಾಮ್‌ಕುಮಾರ್‌ ಆಘಾತ

11:00 PM Feb 21, 2024 | Team Udayavani |

ಪುಣೆ: ಮೊನ್ನೆಯಷ್ಟೇ “ಬೆಂಗಳೂರು ಓಪನ್‌’ ಟೆನಿಸ್‌ ಪ್ರಶಸ್ತಿ ಗೆದ್ದ ಇಟಲಿಯ ಸ್ಟಿಫಾನೊ ನಪೊಲಿಟಾನೊ ಅವರು ಪುಣೆಯಲ್ಲಿ ನಡೆಯುತ್ತಿರುವ “ಮಹಾ ಓಪನ್‌ ಚಾಲೆಂಜರ್’ ಟೆನಿಸ್‌ ಪಂದ್ಯಾವಳಿಯ ಮೊದಲ ಸುತ್ತಿನಲ್ಲೇ ಸೋಲಿನ ಆಘಾತಕ್ಕೆ ಸಿಲುಕಿ ಹೊರಬಿದ್ದಿದ್ದಾರೆ. ಇವರನ್ನು ಕೆಡವಿದವರು ಭಾರತದ ರಾಮ್‌ಕುಮಾರ್‌ ರಾಮನಾಥನ್‌. ಅಂತರ 7-6 (5), 7-6 (5).

Advertisement

ಚೆನ್ನೈ ಓಪನ್‌ ಚಾಂಪಿಯನ್‌ ಸುಮಿತ್‌ ನಾಗಲ್‌ ಚೈನೀಸ್‌ ತೈಪೆಯ ಯು ಸಿಯೂ ಸು ವಿರುದ್ಧ 7-6 (6), 6-4 ಅಂತರದ ಗೆಲುವು ಸಾಧಿಸಿ ದ್ವಿತೀಯ ಸುತ್ತು ಪ್ರವೇಶಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next