Advertisement

Bangalore: ಇಬ್ಬರು ಮಕ್ಕಳನ್ನು ಕೊಂದ ಮಲತಂದೆಯ ಬಂಧನ

07:35 PM Aug 26, 2024 | Team Udayavani |

ಬೆಂಗಳೂರು: ಇಬ್ಬರು ಅಪ್ರಾಪ್ತ ವಯಸ್ಕ ಹೆಣ್ಣು ಮಕ್ಕಳನ್ನು ಹತ್ಯೆಗೈದು ಪರಾರಿಯಾಗಿದ್ದ ಮಲತಂದೆ ಉತ್ತರಾಖಂಡ ಮೂಲದ ಸುಮಿತ್‌ ಮೋಹನ್‌(40)ನನ್ನು ಅಮೃತಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

Advertisement

ಆತ ಪತ್ನಿ ಹಾಗೂ ಮಕ್ಕಳ ಮೇಲೆ ಅತಿಯಾದ ಅನುಮಾನ ಹೊಂದಿದ್ದು, ಅದೇ ಕಾರಣಕ್ಕೆ ಹತ್ಯೆಗೈದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಆತ ನಗರದಲ್ಲಿ ಫ‌ುಡ್‌ ಡೆಲಿವರಿ ಬಾಯ್‌ ಆಗಿ ಕೆಲಸ ಮಾಡುತ್ತಿದ್ದ. ಪತ್ನಿ ಅನಿತಾ ಉತ್ತರ ಪ್ರದೇಶದ ಮೂಲದವರಾಗಿದ್ದು ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಮೊದಲ ಪತಿಯಿಂದ ವಿಚ್ಛೇದನ ಪಡೆದಿದ್ದ ಆಕೆ ಕೆಲವು ವರ್ಷಗಳ ಹಿಂದೆ ಸುಮಿತ್‌ನನ್ನು 2ನೇ ಮದುವೆಯಾಗಿದ್ದರು. ಅದಕ್ಕೂ ಮುನ್ನ ಅನಿತಾಗೆ ಇಬ್ಬರು ಹೆಣ್ಣುಮಕ್ಕಳಿದ್ದರು. ಅನಂತರವೂ ದಂಪತಿ ಚೆನ್ನಾಗಿದ್ದರು.

ಈ ಮಧ್ಯೆ ಸುಮಿತ್‌ಗೆ ಪತ್ನಿ ಮತ್ತು ಇಬ್ಬರು ಮಕ್ಕಳ ಬಗ್ಗೆ ಅನುಮಾನ ಬರಲಾರಂಭಿಸಿದ್ದು, ಪದೇಪದೆ ಜಗಳ ಮಾಡುತ್ತಿದ್ದ. ಗಾಬರಿಗೊಂಡಿದ್ದ ಪತ್ನಿ ಮಕ್ಕಳಿಬ್ಬರನ್ನೂ ಹೆಬ್ಟಾಳದಲ್ಲಿರುವ ತನ್ನ ಸಹೋದರನ ಮನೆಯಲ್ಲಿ ಬಿಟ್ಟು ಬಂದಿದ್ದರು. 20 ದಿನಗಳ ಹಿಂದೆ ಪತ್ನಿ ಹಾಗೂ ಆಕೆಯ ಸಹೋದರನ ಬಳಿ ಕ್ಷಮೆಯಾಚಿಸಿದ್ದ ಸುಮಿತ್‌ ಮಕ್ಕಳನ್ನು ಮತ್ತೆ ಮನೆಗೆ ಕರೆತಂದಿದ್ದ. ಆದರೆ ಶನಿವಾರ ಮಧ್ಯಾಹ್ನ ಮತ್ತೆ ಮಕ್ಕಳ ಜತೆ ಜಗಳ ಮಾಡಿಕೊಂಡಿದ್ದು, ವಿಕೋಪಕ್ಕೆ ಹೋದಾಗ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಂದಿದ್ದ. ಬಳಿಕ ಉತ್ತರಾಖಂಡಕ್ಕೆ ಪರಾರಿಯಾಗಲು ರೈಲು ನಿಲ್ದಾಣಕ್ಕೆ ಹೋದಾಗ ಸಿಕ್ಕಿಬಿದ್ದಿದ್ದಾನೆ ಎಂದು ಪೊಲೀಸರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next