Advertisement

Bangalore ಸರಣಿ ಬಾಂಬ್‌ ಸ್ಫೋಟದ ಪ್ರಮುಖ ಆರೋಪಿ ಅಬ್ದುಲ್‌ ನಾಸರ್‌ ಮದನಿ ಅಸ್ವಸ್ಥ

10:41 PM Jun 27, 2023 | Team Udayavani |

ಕೊಚ್ಚಿ: ಕೇರಳಕ್ಕೆ ಆಗಮಿಸಿರುವ 2008ರ ಬೆಂಗಳೂರು ಸರಣಿ ಬಾಂಬ್‌ ಸ್ಫೋಟದ ಪ್ರಮುಖ ಆರೋಪಿ ಅಬ್ದುಲ್‌ ನಾಸರ್‌ ಮದನಿ ಅಸ್ವಸ್ಥನಾಗಿದ್ದಾನೆ. ಆತನನ್ನು ಕೊಚ್ಚಿಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಸುಪ್ರೀಂ ಕೋರ್ಟ್‌ ಅನುಮತಿಯ ಮೇರೆಗೆ ಅನಾರೋಗ್ಯಪೀಡಿತ ತಂದೆಯನ್ನು ನೋಡಲು ಸೋಮವಾರ ಕೇರಳಕ್ಕೆ ಆಗಮಿಸಿದ್ದ. ಕೊಲ್ಲಂ ಜಿಲ್ಲೆಯ ಸ್ವಗ್ರಾಮಕ್ಕೆ ತೆರಳುವಾಗ ತೀವ್ರ ರಕ್ತದೊತ್ತಡದಿಂದ ಅಸ್ವಸ್ಥನಾಗಿದ್ದ. ಕೊಚ್ಚಿಯ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆ ನಡೆಸದಂತೆ ಕೆಲವು ದಿನಗಳು ಪ್ರಯಾಣ ಮಾಡದಂತೆ ವೈದ್ಯರು ಸೂಚಿಸಿದ್ದಾರೆ

Advertisement

2014ರಲ್ಲಿ ಸುಪ್ರೀಂ ಕೋರ್ಟ್‌ ಮದನಿಗೆ ಜಾಮೀನು ನೀಡಿ, ಬೆಂಗಳೂರು ಬಿಟ್ಟು ತೆರಳದಂತೆ ಸೂಚಿಸಿತ್ತು. ತಂದೆಯ ಅನಾರೋಗ್ಯದ ಹಿನ್ನೆಲೆಯಲ್ಲಿ ಅವರನ್ನು ಕಾಣಲು ಸ್ವಗ್ರಾಮಕ್ಕೆ ತೆರಳಲು ಮದಾನಿಗೆ ಸುಪ್ರೀಂ ಅನುಮತಿ ನೀಡಿದೆ. ಕರ್ನಾಟಕದ ಪೊಲೀಸರೂ ಅಲ್ಲಿಗೆ ತೆರಳಿದ್ದು, ಜು.8ರಂದು ಬೆಂಗಳೂರಿಗೆ ಮರಳಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next