Advertisement

ಬೆಂಗಳೂರು:ರೌಡಿಗಳ ಅಟ್ಟಹಾಸ;ಎಸ್‌ಐ ಮೇಲೆ ಮಚ್ಚಿನ ದಾಳಿ 

09:46 AM Aug 26, 2017 | |

ಬೆಂಗಳೂರು: ನಗರದಲ್ಲಿ  ಪುಡಿ ರೌಡಿಗಳು ಮತ್ತೆ ಅಟ್ಟಹಾಸಗೈದಿದ್ದು, ಎಸ್‌ಐ ಮೇಲೆಯೇ ಮಚ್ಚಿನಿಂದ ಹಲ್ಲೆ ನಡೆಸಿದ್ದಾರೆ. 

Advertisement

ಗುರುವಾರ ಉಮರ್‌ ಎಂಬ ರೌಡಿ ಶೀಟರ್‌ನ ಹತ್ಯೆಗೆ ಸ್ಕೆಚ್‌ ಹಾಕಿದ್ದ ರೌಡಿ  ನದೀಂ ಗ್ಯಾಂಗನ್ನು  ಡಿಜೆ ಹಳ್ಳಿ ಠಾಣೆಯ ಎಸ್‌ಐ ನಯಾಝ್ ಅಹಮದ್‌ ತಡೆಯಲು ಕಾರ್ಯಾಚರಣೆಗಿಳಿದಿದ್ದಾರೆ. 

ಈ ವೇಳೆ ರೌಡಿಗಳು ಎಸ್‌ಐ ನಯಾಜ್‌ ಹಣೆಗೆ ಮಚ್ಚಿನಿಂದ ಇರಿದು ಪರಾರಿಯಾಗಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ನಯಾಝ್ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ರೌಡಿಗಳ ಹೆಡೆಮುರಿ ಕಟ್ಟಲು ಕಾರ್ಯಾಚರಣೆಗಿಳಿದಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next