Advertisement

ಎಚ್‌.ಡಿ.ದೇವೇಗೌಡರಿಗೆ 2 ಕೋಟಿ ರೂ. ದಂಡ

06:15 PM Jun 22, 2021 | Team Udayavani |

ಬೆಂಗಳೂರು: ನಂದಿ ಇನ್ ಫ್ರಾಸ್ಟ್ರಕ್ಚರ್ ಕಾರಿಡಾರ್‌(ನೈಸ್‌)ಸಂಸ್ಥೆವಿರುದ್ಧ ಆರೋಪ ‌ ಸಾಬೀತುಪ‌ಡಿಸುವಲ್ಲಿ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ವಿಫ‌ಲರಾಗಿದ್ದು, ಹೀಗಾಗಿ ನೈಸ್‌ ಕಂಪನಿಗೆ ಎರಡು ಕೋಟಿ ರೂ. ಪರಿಹಾರ ‌ ಕಟ್ಟಿಕೊಡಬೇಕು  ಎಂದು ಬೆಂಗಳೂರು ಸಿಟಿ ಸಿವಿಲ್‌ ಕೋರ್ಟ್‌ ಆದೇಶಿಸಿದೆ.

Advertisement

2011ರಲ್ಲಿ ಖಾಸಗಿ ಸುದ್ದಿವಾಹಿನಿಯ ಸಂದರ್ಶನದಲ್ಲಿ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡಅವರು ನೈಸ್‌ ಸಂಸ್ಥೆ ಗೌರವಕ್ಕೆ ಧಕ್ಕೆ ತರುವ ರೀತಿಯಲ್ಲಿ ಹೇಳಿಕೆ ನೀಡಿದ್ದರು. ಈ ಸಂಬಂಧ ಸಂಸ್ಥೆ 10 ಕೋಟಿ ರೂ. ಮಾನನಷ್ಟ ಪರಿಹಾರಕೋರಿ ಅರ್ಜಿ ಸಲ್ಲಿಸಿದ್ದರು.

ಈ ಪ್ರಕರಣದ ವಿಚಾರಣೆ ನಡೆಸಿದ ಸಿಟಿ ಸಿವಿಲ್‌ಕೋರ್ಟ್‌ ನ ನ್ಯಾಯಾಧೀಶರಾದ ಮಲ್ಲನಗೌಡ ಅವರುಎರಡು ಕೋಟಿ ರೂ. ನಷ್ಟ ಪರಿಹಾರ ನೀಡುವಂತೆ ದೇವೇಗೌಡರಿಗೆ ಆದೇಶಿಸಿದ್ದಾರೆ. ಸಂಸ್ಥೆಯ ವಿರುದ್ಧ ಮಾಡಿದ ಆರೋಪಗಳನ್ನು ಸಾಬೀತುಮಾಡುವಲ್ಲಿ ಎಚ್‌.ಡಿ.ದೇವೇಗೌಡರು ವಿಫ‌ಲರಾಗಿರುವ ಹಿನ್ನೆಲೆಯಲ್ಲಿನಷ್ಟ ಪರಿಹಾರಕೊಡಬೇಕು ಎಂದು ನ್ಯಾಯಾಲಯ ಆದೇಶಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next