Advertisement

ಪ್ರಿಯಕರನಿಗೆ ಗಂಡಸ್ತನ ಸವಾಲು ಹಾಕಿ ಪತಿ ಹತ್ಯೆ

01:58 PM Nov 13, 2022 | Team Udayavani |

ಬೆಂಗಳೂರು: ಪತಿಗೆ ಲೈಂಗಿಕಾಸಕ್ತಿ ಕಡಿಮೆ ಇದೆ ಎಂದು ಬೇರೊಬ್ಬನ ಜತೆ ಅಕ್ರಮ ಸಂಬಂಧ ಹೊಂದಿದ್ದ 48 ವರ್ಷದ ಮಹಿಳೆಯೊಬ್ಬರು 28 ವರ್ಷದ ಪ್ರಿಯಕರನ ಜತೆ ಸೇರಿ ಪತಿಯನ್ನು ಕೊಲೆಗೈದು ಇದೀಗ ವಿದ್ಯಾರಣ್ಯಪುರ ಪೊಲೀಸರ ಅತಿಥಿಯಾಗಿದ್ದಾರೆ.

Advertisement

ಪಶ್ಚಿಮ ಬಂಗಾಳ ಮೂಲದ ದೇವಿ ತೋಮಾಂಗ್‌(46) ಮತ್ತು ಆಕೆಯ ಪ್ರಿಯಕರ ಅಸ್ಸಾಂ ಮೂಲದ ಜೈನುಲ್‌ ಅಲಿ ಬಾಬು (30) ಬಂಧಿತರು.

ಆರೋಪಿಗಳು ನ.6ರಂದು ರಾಕೇಶ್‌ ತೋಮಾಂಗ್‌ (52) ಎಂಬುವರನ್ನು ಉಸಿರುಗಟ್ಟಿಸಿ ಕೊಲೆಗೈದಿದ್ದರು. ತನ್ನು ಪ್ರಿಯಕರನಿಗೆ ಗಂಡಸ್ತನ ಬಗ್ಗೆ ಸವಾಲು ಹಾಕಿ ಪತಿಯನ್ನು ಹತ್ಯೆಗೈದಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಂಗಾಳ ಮೂಲದ ರಾಕೇಶ್‌, 30 ವರ್ಷಗಳ ಹಿಂದೆ ಬೆಂಗಳೂರಿಗೆ ಬಂದಿದ್ದು, 10 ವರ್ಷಗಳ ಹಿಂದೆ ದೇವಿ ತೋಮಾಂಗ್‌ ಎಂಬಾಕೆಯನ್ನು ಮದುವೆಯಾಗಿದ್ದು, ದಂಪತಿ ವಡೇರಹಳ್ಳಿಯಲ್ಲಿ ವಾಸವಾಗಿದ್ದರು. ರಾಕೇಶ್‌, ಸೆಕ್ಯೂರಿಟಿ ಗಾರ್ಡ್‌ ಕೆಲಸ ಮಾಡುತ್ತಿದ್ದು, ದೇವಿ ಮನೆ ಕೆಲಸಕ್ಕೆ ಹೋಗುತ್ತಿದ್ದಳು. ಪತಿ ಕೆಲಸ ಮಾಡುತ್ತಿದ್ದ ಸ್ಥಳಕ್ಕೆ ಊಟ ಕೊಡಲು ಹೋದಾಗ ಜೈನುಲ್‌ ಅಲಿಯನ್ನು ಪರಿಚಯಿಸಿಕೊಂಡಿದ್ದು, ಆತನ ಜತೆ ಅಕ್ರಮ ಸಂಬಂಧ ಹೊಂದಿದ್ದಳು. ಹೀಗಾಗಿ ರಾಕೇಶ್‌ ಮದ್ಯದ ದಾಸನಾಗಿ ಪತ್ನಿ ಜತೆ ಜಗಳ ಮಾಡುತ್ತಿದ್ದ.

ಪತಿಗೆ ಲೈಂಗಿಕಾಸಕ್ತಿ ಕಡಿಮೆ, ಕೊಲೆ: ಪತಿ ರಾಕೇಶ್‌ ವಿಪರೀತ ಮದ್ಯ ಸೇವಿಸುತ್ತಿದ್ದರಿಂದ ಆತನಿಗೆ ಲೈಂಗಿಕ ಆಸಕ್ತಿ ಕಡಿಮೆ ಇತ್ತು. ಹೀಗಾಗಿ 28 ವರ್ಷದ ಜೈನುಲ್‌ ಬಾಬು ಜತೆ ಪತ್ನಿ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಳು. ಮತ್ತೂಂದೆಡೆ ಪತ್ನಿಯ ಅಕ್ರಮ ಸಂಬಂಧ ಮುಂದುವರಿದ ಬಗ್ಗೆ ಆಕ್ರೋಶಗೊಂಡಿದ್ದ ರಾಕೇಶ್‌ ಪತ್ನಿಗೆ ಹೊಡೆಯುತ್ತಿದ್ದ. ಆದರಿಂದ ದೇವಿ ತೋಮಾಂಗ್‌, ಪ್ರಿಯಕರ ಜೈನುಲ್‌ ಬಾಬುಗೆ ಕೊಲೆಗೆ ಸುಪಾರಿ ಕೊಟ್ಟಿದ್ದಳು.

Advertisement

ಅದರಂತೆ ಇಬ್ಬರು ಸಂಚು ರೂಪಿಸಿ ನ.5ರಂದು ಮದ್ಯದ ಬಾಟಲಿಗಳು ಮತ್ತು ಕಬಾಬ್‌ ತಂದಿದ್ದ ದೇವಿ, ಪತಿಗೆ ಕಂಠಪೂರ್ತಿ ಮದ್ಯ ಕುಡಿಸಿದ್ದಾಳೆ. ಬಳಿಕ ಆತ ಮಲಗಿದ್ದಾಗ ಜೈನುಲ್‌ ಬಾಬು ಆತನ ಕುತ್ತಿಗೆ ಹಿಸುಕಿದರೆ, ದೇವಿ ಪತಿಯ ಕೈ, ಕಾಲು ಹಿಡಿದುಕೊಂಡು ಕೊಲೆಗೆ ಸಹಕರಿಸಿದ್ದಳು. ಮರುದಿನ ಪತಿ ಮದ್ಯಪಾನ ಮಾಡಿ ಎದೆ ಊರಿ ಎಂದು ಹೇಳುತ್ತ ಮೃತಪಟ್ಟಿದ್ದಾರೆ ಎಂದು ನಾಟಕ ಮಾಡಿದ್ದಳು.

ಬಳಿಕ ಸ್ಥಳಕ್ಕೆ ಬಂದು ಸಂಬಂಧಿಯೊಬ್ಬರು ರಾಕೇಶ್‌ ಕುತ್ತಿಗೆ ಬಳಿಯಿದ್ದ ಗುರುತು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಬಳಿಕ ಮರಣೋತ್ತರ ಪರೀಕ್ಷೆಯಲ್ಲಿ ಉಸಿರುಗಟ್ಟಿಸಿ ಕೊಲೆಗೈದಿದ್ದಾರೆ ಎಂಬುದು ಪತ್ತೆಯಾಗುತ್ತಿದ್ದಂತೆ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.

ಪ್ರಿಯಕರನಿಗೆ ಗಂಡಸ್ತನ ಸವಾಲು!:

“ನೀನು ಗಂಡಸಾಗಿದ್ದರೆ ನನ್ನ ಪತಿಯನ್ನು ಕೊಲೆ ಮಾಡು. ಆಗ ಮಾತ್ರ ನನ್ನ ಜತೆ ಮಲಗಲು ಅವಕಾಶ ನೀಡುತ್ತೇನೆ. ಇಲ್ಲವಾದರೆ ನನ್ನನ್ನು ಬಿಟ್ಟು ಬಿಡು. ನಮ್ಮಿಬ್ಬರ ಸಂಬಂಧಕ್ಕೆ ಪತಿ ರಾಕೇಶ್‌ ಅಡ್ಡಿ ಆಗುತ್ತಿದ್ದಾನೆ. ಆತನನ್ನು ಮುಗಿಸಿಬಿಡು’ ಎಂದು ಸವಾಲು ಹಾಕಿದ್ದಳು. ಅದರಿಂದ ಪ್ರಚೋದನೆಗೊಂಡ ಕೊಲೆಗೈದಿದ್ದಾನೆ ಎಂದು ಪೊಲೀಸರು ಹೇಳಿದರು.

ಒಂಭತ್ತು ದಿನಗಳ ಕಾಲ ಮನೆಯಲ್ಲೇ ಇದ್ದ ಪ್ರಿಯಕರ!

ನ.6ರಂದು ರಾಕೇಶ್‌ ಕೊಲೆಯಾಗಿದ್ದರು. ಜೈನುಲ್‌ ಬಾಬು ಅ.29ರಂದು ರಾತ್ರಿಯೇ ರಾಕೇಶ್‌ ಮನೆಗೆ ಬಂದಿದ್ದ. ಮನೆಯಲ್ಲಿ ಎರಡು ಬೆಡ್‌ರೂಮ್‌ ಇದ್ದು, ಅದರಲ್ಲಿ ಒಂದು ಸ್ಟೋರ್‌ ರೂಮ್‌ ಇತ್ತು. ಅಲ್ಲಿ ಪ್ರಿಯಕರನನ್ನು ದೇವಿ ಇರಿಸಿದ್ದಳು. ಆತನಿಗೆ ಎಲ್ಲ ರೀತಿಯ ಉಪಚಾರ ಮಾಡುತ್ತಿದ್ದಳು. ಅ.29ರಂದು ಕೊಲೆಗೆ ಯತ್ನಿಸಿದ್ದರು. ಆದರೆ, ಸಾಧ್ಯವಾಗಿರಲಿಲ್ಲ. ನಂತರ 9 ದಿನಗಳು ಮನೆಯಲ್ಲೇ ಇದ್ದು, ನ.6ರಂದು ಕೊಲೆಗೈದು ಪರಾರಿಯಾಗಿದ್ದ. ಮತ್ತೂಂದೆಡೆ ಪೊಲೀಸರ ಕಣ್ಣು ತಪ್ಪಿಸಲು ದೇವಿ ತೋಮಾಂಗ್‌, ಪ್ರಿಯಕರ ಬಾಬುಗೆ ತನ್ನ ಹೆಸರಿನಲ್ಲಿಯೇ ಹೊಸ ಸಿಮ್‌ ಕಾರ್ಡ್‌ ಕೊಡಿಸಿದ್ದಳು. ಹೀಗಾಗಿ ಬಾಬು ಹಳೇ ಫೋನ್‌, ಸಿಮ್‌ಕಾರ್ಡ್‌ ಎಸೆದು ಹೊಸ ನಂಬರ್‌ ಬಳಸುತ್ತಿದ್ದ ಎಂದು ಪೊಲೀಸರು ಹೇಳಿದರು.

ಪತಿ ಫೋನ್‌ ಪೇನಿಂದ ಪ್ರಿಯಕರನಿಗೆ ಹಣ ವರ್ಗ

ರಾಕೇಶ್‌ ಕೊಲೆಯಾದ ಮರುದಿನ ದೇವಿ, ತನ್ನ ಪತಿಯ ಫೋನ್‌ ಪೇನಿಂದ ಪ್ರಿಯಕರನಿಗೆ 50 ಸಾವಿರ ರೂ. ವರ್ಗಾಯಿಸಿದ್ದಳು. ದೇವಿಯ ಕಾಲ್‌ ಡಿಟೇಲ್ಸ್‌ ಮತ್ತು ಬ್ಯಾಂಕ್‌ ಮಾಹಿತಿ ಪಡೆದುಕೊಂಡು ತನಿಖೆ ನಡೆಸಿದಾಗ ಆರೋಪಿ ಹೊಸೂರು ಬಳಿ ಅಡಗಿಕೊಂಡಿರುವ ಮಾಹಿತಿ ಸಿಕ್ಕಿ, ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.

 

Advertisement

Udayavani is now on Telegram. Click here to join our channel and stay updated with the latest news.

Next