Advertisement

Bangalore: ಪತ್ನಿ ಪೀಡಕನ ಕೊಂದು ಕಸದಲ್ಲಿ ಶವ ಎಸೆದ ಪತಿ

12:48 PM Oct 17, 2023 | Team Udayavani |

ಬೆಂಗಳೂರು: ಪತ್ನಿ ಜತೆ ಅನುಚಿತವಾಗಿ ವರ್ತಿಸಿದ ಕೂಲಿ ಕಾರ್ಮಿಕನನ್ನು ದಂಪತಿ ಕೊಲೆಗೈದಿರುವ ಘಟನೆ ಮಹಾಲಕ್ಷ್ಮೀ ಲೇಔಟ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

Advertisement

ಬಿಹಾರ ಮೂಲದ ಸಜ್ಜನ್‌ ಸಿಂಗ್‌(33) ಕೊಲೆಯಾದವ.

ಈ ಸಂಬಂಧ ದಂಪತಿಯನ್ನು ಬಂಧಿಸಲಾ ಗಿದೆ. ಕೆಲ ವರ್ಷಗಳ ಹಿಂದೆ ಬಿಹಾರ ದಿಂದ ನಗರಕ್ಕೆ ಬಂದಿದ್ದ ಸಜ್ಜನ್‌ ಸಿಂಗ್‌, ಆರ್‌ಎಂಸಿ ಯಾರ್ಡ್‌ನಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದ. ಸೋಮವಾರ ಬೆಳಗ್ಗೆ 7.30ರ ಸುಮಾರಿಗೆ ಸೋಮೇಶ್ವರನಗರ ಗಲ್ಲಿಯೊಂದರಲ್ಲಿ ಸಜ್ಜನ್‌ ಸಿಂಗ್‌ ಮೃತದೇಹ ಪತ್ತೆಯಾಗಿತ್ತು. ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ಮಹಾ ಲಕ್ಷ್ಮೀ ಲೇಔಟ್‌ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲಿಸಿದ್ದಾರೆ.

ಬಳಿಕ ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದಾಗ ದಂಪತಿ ಕೈವಾಡ ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಇಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.

ಕೊಲೆಯಾದ ಸಜ್ಜನ್‌ ಸಿಂಗ್‌, ಆರೋಪಿಯಾಗಿರುವ ಮಹಿಳೆ ಜತೆ ಅನುಚಿತವಾಗಿ ವರ್ತಿಸಿದ್ದ. ಜತೆಗೆ ಖಾಸಗಿಯಾಗಿ ಸಿಗುವಂತೆ ಪೀಡಿಸುತ್ತಿದ್ದ. ಅದರಿಂದ ಬೇಸತ್ತ ಮಹಿಳೆ, ಈ ವಿಚಾರವನ್ನು ಪತಿಗೆ ಹೇಳಿದ್ದಳು. ಆಕೆಯ ಪತಿ ಕೂಡ ಸಜ್ಜನ್‌ ಸಿಂಗ್‌ಗೆ ಎಚ್ಚರಿಕೆ ನೀಡಿದ್ದ. ಆದರೂ ಸಜ್ಜನ್‌ ಸಿಂಗ್‌, ಮಹಿಳೆಗೆ ಕಿರುಕುಳ ಮುಂದುವರಿಸಿದ್ದ. ಅದರಿಂದ ಬೇಸತ್ತ ಆರೋಪಿತ ದಂಪತಿ, ಸಂಚು ರೂಪಿಸಿ ಸಜ್ಜನ್‌ ಸಿಂಗ್‌ ನ ಕತ್ತು ಕೊಯ್ದು ಕೊಲೆಗೈದು ಕಸ ಎಸೆಯುವ ಜಾಗಕ್ಕೆ ಬೀಸಾಡಿದ್ದರು ಎಂದು ಪೊಲೀಸರು ಹೇಳಿದರು. ಮಹಾಲಕ್ಷ್ಮೀ ಲೇಔಟ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next