Advertisement

Crime News: ಸ್ನೇಹಿತನಿಂದಲೇ ಗುಜರಿ ವ್ಯಾಪಾರಿ ಬರ್ಬರ ಹತ್ಯೆ

01:42 PM Sep 17, 2023 | Team Udayavani |

ಬೆಂಗಳೂರು: ಹಣಕಾಸಿನ ವಿಚಾರಕ್ಕೆ ಗುಜರಿ ವ್ಯಾಪಾರಿಯನ್ನು ಬಾಲ್ಯ ಸ್ನೇಹಿತನೇ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದಿರುವ ಘಟನೆ ಮಹದೇವಪುರ ಠಾಣೆ ವ್ಯಾಪ್ತಿಯ ಟಿನ್‌ ಫ್ಯಾಕ್ಟರಿ ಬಳಿ ಶನಿವಾರ ರಾತ್ರಿ ನಡೆದಿದೆ.

Advertisement

ಸಿಗೇಹಳ್ಳಿ ನಿವಾಸಿ ರಫೀಕ್‌ ಅಹ್ಮದ್‌ (28) ಕೊಲೆಯಾದ ಗುಜರಿ ವ್ಯಾಪಾರಿ. ಆರೋಪಿಗಳ ಸುಳಿವು ಸಿಕ್ಕಿದ್ದು, ಸದ್ಯದಲ್ಲೇ ಬಂಧಿಸಲಾಗುತ್ತದೆ ಎಂದು ಪೊಲೀಸರು ಹೇಳಿದರು.

ರಾತ್ರಿ 8.30ಕ್ಕೆ ರಫೀಕ್‌ ಅಹ್ಮದ್‌ ಟಿನ್‌ ಫ್ಯಾಕ್ಟರಿ ಮೆಟ್ರೋ ನಿಲ್ದಾಣ ಬಳಿ ನಿಂತಿದ್ದ. ಇದೇ ವೇಳೆ ಆತನ ಬಾಲ್ಯ ಸ್ನೇಹಿತ ಮತ್ತು ಇತರರು ಕೊಲೆಗೈದಿದ್ದಾರೆ. ಹಣಕಾಸು ಮತ್ತು ಯುವತಿಯ ವಿಚಾರಕ್ಕೆ ಜಗಳ ತೆಗೆದು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈಯಲಾಗಿದೆ ಎಂದು ಹೇಳಲಾಗಿದೆ.

ಘಟನಾ ಸ್ಥಳಕ್ಕೆ ಶ್ವಾನದಳ, ವಿಧಿವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳು ಭೇಟಿ ಪರಿಶೀಲಿಸಿದ್ದಾರೆ ಎಂದು ಪೊಲೀಸರುಹೇಳಿದರು.

ಸ್ಥಳಕ್ಕೆ ವೈಟ್‌ಫೀಲ್ಡ್‌ ವಿಭಾಗದ ಡಿಸಿಪಿ ಸಂಜೀವ್‌ ಎಂ.ಪಾಟೀಲ್‌ ಭೇಟಿ ನೀಡಿ ಪರಿಶೀಲಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next