Advertisement

ಒಳ ಉಡುಪಿನಲ್ಲಿ ಮೊಬೈಲ್‌ ಇಟ್ಟು  ಜೈಲಿನೊಳಗೆ ಸಾಗಾಟ!

02:33 PM Jul 29, 2023 | Team Udayavani |

ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಸಿಬ್ಬಂದಿಯೇ ಕೈದಿಗಳಿಗೆ ಮೊಬೈಲ್‌, ಗಾಂಜಾ ಪೂರೈಸುತ್ತಿರುವ ಆರೋಪ ಕೇಳಿ ಬರುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ಒಳಉಡುಪಿನಲ್ಲಿ ಮೊಬೈಲ್‌ ಇಟ್ಟು ಜೈಲಿನೊಳಗೆ ಸಾಗಿಸುತ್ತಿದ್ದ ಡಿ-ದರ್ಜೆ ನೌಕರ ಸಿಕ್ಕಿಬಿದ್ದಿದ್ದಾನೆ.

Advertisement

ಭಾನುಪ್ರಕಾಶ್‌ (52) ಸಿಕ್ಕಿಬಿದ್ದ ಜೈಲು ಸಿಬ್ಬಂದಿ.

ಡಿ-ದರ್ಜೆ ನೌಕರ ಭಾನುಪ್ರಕಾಶ್‌ ಪೊಲೀಸ್‌ ವಾಹನಗಳನ್ನು ಸ್ವತ್ಛ ಮಾಡುತ್ತಿದ್ದ. ಜು.25ರಂದು ಜೈಲಿನೊಳಗೆ ಪ್ರವೇಶಿಸುವಾಗ ಭದ್ರತಾ ತಪಾಸಣಾ ವೇಳೆ ಒಳ ಉಡುಪಿನಲ್ಲಿ ಮೊಬೈಲ್‌ ಇಟ್ಟುಕೊಂಡಿರುವುದು ಪತ್ತೆಯಾಗಿತ್ತು. ಪೊಲೀಸರು ಆತನನ್ನು ವಿಚಾರಿಸಿದಾಗ ಕಡಿಮೆ ಬೆಲೆಯ ಬೇಸಿಕ್‌ ಸೆಟ್‌ ಮೊಬೈಲ್‌ ಖರೀದಿಸಿ ಮರೆತು ಒಳಉಡುಪಿನಲ್ಲಿ ಇಟ್ಟಿರುವುದಾಗಿ ಗೊಂದಲದ ಹೇಳಿಕೆ ನೀಡಿದ್ದ. ಕೈದಿಗಳೊಂದಿಗೆ ಭಾನುಪ್ರಕಾಶ್‌ ಸಂಪರ್ಕ ಹೊಂದಿರುವ ಶಂಕೆ ವ್ಯಕ್ತವಾಗಿದ್ದು, ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಜೈಲಿನ ಅಧೀಕಕ್ಷ ಮಲ್ಲಿಕಾರ್ಜುನ ನೀಡಿದ ದೂರಿನ ಆಧಾರದ ಮೇರೆಗೆ ಬಂಧಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next