Advertisement

ವಿಶೇಷ ಸ್ಥಾನಮಾನ ಆಗ್ರಹಿಸಿ ಇಂದು ಆಂಧ್ರ ಪ್ರದೇಶ ಬಂದ್‌

12:39 PM Apr 16, 2018 | udayavani editorial |

ಅಮರಾವತಿ : ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡುವಂತೆ ಆಗ್ರಹಿಸಿ ಜನತಾ ವೇದಿಕೆ ನೀಡಿರುವ ರಾಜ್ಯಾದ್ಯಂತದ ಕರೆಯನ್ವಯ ಇಂದು ಆಂಧ್ರ ಪ್ರದೇಶದಲ್ಲಿ ಬಂದ್‌ ನಡೆಯುತ್ತಿದೆ.

Advertisement

ಬಂದ್‌ ಗೆ ಆಳುವ ತೆಲುಗು ದೇಶಂ ಪಕ್ಷದ ಬೆಂಬಲ ಇದೆಯಾದರೂ ಅದು ಅಧಿಕೃತವಾಗಿ ಬಂದ್‌ನಿಂದ ದೂರ ಉಳಿಯಲು ನಿರ್ಧರಿಸಿದೆ. 

ತಿರುಪತಿಯಲ್ಲಿಂದು ಬೆಳಗ್ಗೆ ಬೈಕ್‌ ಒಂದನ್ನು ಸುಟ್ಟದ್ದು ಬಿಟ್ಟರೆ ಬೇರೆಲ್ಲೂ  ಈ ತನಕ ಯಾವುದೇ ಅಹಿತಕರ ಘಟನೆ ನಡೆದ ವರದಿಗಳಿಲ್ಲ.  ವೈಎಸ್‌ಆರ್‌ ಮತ್ತು ಕಾಂಗ್ರೆಸ್‌ ಸಹಿತ ಎಲ್ಲ ವಿರೋಧ ಪಕ್ಷಗಳು ಬಂದ್‌ ಬೆಂಬಲಿಸಿವೆ. 

ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರಿಂದು ಉನ್ನತ ಪೊಲೀಸ್‌ ಅಧಿಕಾರಿಗಳೊಂದಿಗೆ ಸಭೆ ನಡೆಸಿ ರಾಜ್ಯಾದ್ಯಂತದ ಕಾನೂನು ಮತ್ತು ಶಿಸ್ತು ಪರಿಸ್ಥಿತಿಯನ್ನು ಅವಲೋಕಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next