Advertisement

ಹಿಜಾಬ್ ತೀರ್ಪಿನ ಕುರಿತು ಬಂದ್; ಪ್ರತಿಭಟನೆ ಅವರ ಹಕ್ಕು : ಸಿದ್ದರಾಮಯ್ಯ

06:33 PM Mar 17, 2022 | Team Udayavani |

ಬೆಂಗಳೂರು : ಜೇಮ್ಸ್ ಚಿತ್ರಕ್ಕೆ ತೆರಿಗೆ ವಿನಾಯಿತಿ ನೀಡಬೇಕೆಂದು ಸರ್ಕಾರಕ್ಕೆ ಪತ್ರ ಬರೆಯುವೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಗುರುವಾರ ಹೇಳಿದ್ದಾರೆ.

Advertisement

ವಿಧಾನಸೌಧ ದಲ್ಲಿ ಮಾತನಾಡಿದ ಅವರು, ಪುನೀತ್ ಬಗ್ಗೆ ಬೊಮ್ಮಾಯಿ ಬಹಳ ಪ್ರೀತಿ ತೋರಿಸಿದ್ದರು. ಪದ್ಮಶ್ರೀ ಪ್ರಶಸ್ತಿಗೆ ರಾಜ್ಯ ಸರ್ಕಾರ ಶಿಫಾರಸು ಮಾಡಿತ್ತೋ ಇಲ್ಲವೋ ಗೊತ್ತಿಲ್ಲ ಎಂದರು. ನಮ್ಮ ಕಾಡಿನವರು ಎಂದು ರಾಜಕುಮಾರ್ ನನಗೆ ಹೇಳುತ್ತಿದ್ದರು.ಪುನೀತ್ ರಾಜ್‍ಕುಮಾರ್ ಕೂಡ ಜನಪ್ರಿಯ ವ್ಯಕ್ತಿ. ಎಲ್ಲರೂ ಜೇಮ್ಸ್ ಚಿತ್ರ ಎಲ್ಲ ನೋಡಿ ಎಂದು ಕರೆ ನೀಡಿದರು. ನಾನು ಥಿಯೇಟರ್ ಗೆ ಹೋಗುವುದಿಲ್ಲ.ಹೋಗ್ಬಾರದು ಅಂತಿಲ್ಲ, ಥಿಯೇಟರ್ ಗೆ ಹೋಗುವ ಅಭ್ಯಾಸ ತಪ್ಪಿದೆ. ಹಿಂದೆ ರಾಜಕುಮಾರ ಫಿಲಂಗೆ ಹೋಗಿದ್ದೆ ಎಂದರು.

ಶಾಂತಿಯುತವಾಗಿ ಮಾಡಿಕೊಳ್ಳಲಿ

ಹಿಜಾಬ್ ಕುರಿತ ಹೈಕೋರ್ಟ್ ತೀರ್ಪಿನ ವಿರುದ್ದ ಪ್ರತಿಭಟನೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಬಂದ್, ಪ್ರತಿಭಟನೆ ಅವರ ಹಕ್ಕು, ಶಾಂತಿಯುತವಾಗಿ ಮಾಡಿಕೊಳ್ಳಲಿ, ಕೋರ್ಟ್ ಆದೇಶ ಧಿಕ್ಕರಿಸುತ್ತೇವೆ ಎಂದು ಹೇಳಿಲ್ಲ, ಅಸಮಾಧಾನ ಇದೆ ಹಾಗಾಗಿ ಪ್ರತಿಭಟನೆ ಮಾಡುತ್ತೇವೆ ಎಂದಿದ್ದಾರೆ. ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ ಸಲ್ಲಿಸಲು ಎಲ್ಲರಿಗೂ ಅವಕಾಶ ಇದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next