Advertisement

‘ಭಾರತ್‌ ಬಂದ್‌’ಬಿಜೆಪಿಯ ಚುನಾವಣಾ ಸಂಚು: ಮಾಯಾವತಿ ಟೀಕೆ

05:38 PM Sep 07, 2018 | udayavani editorial |

ಹೊಸದಿಲ್ಲಿ : ಎಸ್‌ಸಿ/ಎಸ್‌ಟಿ ಕಾಯಿದೆ ತಿದ್ದುಪಡಿ ವಿರೋಧದ ಭಾರತ್‌ ಬಂದ್‌ “ಬಿಜೆಪಿಯ ಚುನಾವಣಾ ಸಂಚು” ಎಂದು ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಟೀಕಿಸಿದ್ದಾರೆ.

Advertisement

ಎಸ್‌ಸಿ/ಎಸ್‌ಟಿ ಕಾಯಿದೆ ತಿದ್ದುಪಡಿ ವಿರುದ್ದ ಮೇಲ್ವರ್ಗದ ಜಾತಿಯವರು ಮತ್ತು ಒಬಿಸಿ ಸಮೂಹದವರು ನಡೆಸಿರುವ ಭಾರತ್‌ ಬಂದ್‌, ಲೋಕಸಭಾ ಚುನಾವಣೆಗೆ ಮುನ್ನ ಜನರನ್ನು ಜಾತಿ ನೆಲೆಯಲ್ಲಿ ಒಡೆಯಲು ಬಿಜೆಪಿ ನಡೆಸಿರುವ ಚುನಾವಣಾ ಸಂಚಾಗಿದೆ ಎಂದು ಮಾಯಾವತಿ ಹೇಳಿದರು.  

ಈ ದಿನಗಳಲ್ಲಿ ದೇಶವನ್ನು ಜ್ವಲಂತವಾಗಿ ಕಾಡುತ್ತಿರುವ ಪೆಟ್ರೋಲ್‌ ಡೀಸೆಲ್‌ ಬೆಲೆ ಏರಿಕೆ ಸಮಸ್ಯೆಯಿಂದ ಜನರ ಮನಸ್ಸನ್ನು ಬೇರೆಡೆಗೆ ಹರಿಸಲು ಬಿಜೆಪಿ ನಡೆಸಿರುವ ಕುಟಿಲೋಪಾಯ ಇದಾಗಿದೆ ಎಂದು ಮಾಯವತಿ ಆರೋಪಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next