Advertisement

ಬನವಾಸಿಯ ಕದಂಬೋತ್ಸವದ ದಿನಾಂಕ ಬದಲು: ಕಾರಣ ಏನು?

03:33 PM Feb 17, 2023 | Team Udayavani |

ಶಿರಸಿ: ಕನ್ನಡಿಗರ ಪ್ರಥಮ ರಾಜಧಾನಿ ಬನವಾಸಿಯಲ್ಲಿ‌ ನಡೆಸಲಾಗುವ ಕದಂಬೋತ್ಸವ ಆಚರಣೆಯ ದಿನಾಂಕವನ್ನು ಮರು ನಿಗದಿ‌ ಮಾಡಲಾಗಿದೆ ಎಂದು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ತಿಳಿಸಿದ್ದಾರೆ.

Advertisement

ಈ‌ ಮೊದಲು ಫೆ.25 ಹಾಗೂ 26 ರಂದು ನಡೆಸಲು ಯೋಜಿಸಲಾಗಿತ್ತು. ಆದರೆ, ಫೆ.28, ಮಾರ್ಚ 1 ರಂದು‌ ಮರು ನಿಗದಿಗೊಳಿಸಿ ನಡೆಸಲಾಗುತ್ತದೆ ಎಂದಿದ್ದಾರೆ. ಸಿಎಂ ಬಸವರಾಜ್ ಬೊಮ್ಮಾಯಿ ಅವರು ಅನಿವಾರ್ಯವಾಗಿ ಅನ್ಯ ಕಾರ್ಯಕ್ರಮದಲ್ಲಿ ಮೊದಲಿನ ದಿನಾಂಕದಲ್ಲಿ ಪಾಲ್ಗೊಳ್ಳಬೇಕಾಗಿದ್ದರಿಂದ ದಿನಾಂಕ ಮರು ನಿಗದಿ ಮಾಡಲಾಗಿದೆ ಎಂದು ಸಚಿವ ಹೆಬ್ಬಾರ್ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next