Advertisement

ವಾರಾಣಸಿಯ ಗಂಗಾ ತಟದಲ್ಲಿ ಬನಾರಸ್ ಜೋಡಿ; ಪವಿತ್ರ ಗಂಗಾರತಿಯಲ್ಲಿ ಭಾಗಿ

11:57 AM Oct 18, 2022 | Team Udayavani |

ಪಂಚ ಭಾಷೆಗಳಲ್ಲೂ ಸದ್ದು ಮಾಡ್ತಿರುವ ಬನಾರಸ್  ಸಧ್ಯ ಸಿನಿಪ್ರಿಯರ ಗಮನ ಸೆಳೆದಿರುವ ಬಹುನಿರೀಕ್ಷಿತ ಚಿತ್ರ. ಬನಾರಸ್ ಸಿನಿಮಾದ ಹೀರೋ ಝೈದ್ ಖಾನ್ ಮತ್ತು ಸೋನಲ್ ಮೊಂತೇರೊ ಗಂಗಾರತಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಜಯತೀರ್ಥ ನಿರ್ದೇಶನದ  ಬನಾರಸ್ ಸಿನೆಮಾ ಬಗೆಗೆ ಪ್ರೇಕ್ಷಕರು ಸಾಕಷ್ಟು ನಿರೀಕ್ಷೆಗಳನ್ನ ಇಟ್ಟುಕೊಂಡಿದ್ದಾರೆ. ಸಿನೆಮಾದ ಮೋಷನ್ ಪೋಸ್ಟರ್, ಟ್ರೈಲರ್, ಮಾಯಗಂಗೆ ಹಾಡನ್ನ ನೋಡಿದ ಮೇಲೆ ಚಿತ್ರದ ಮೇಲಿನ ಭರವಸೆ ದುಪ್ಪಾಟ್ಟಾಗಿದೆ. ನವ ನಾಯಕ ಝೈದ್ ಖಾನ್ ನಾಯಕನಾಗಿ ನಟಿಸಿದ್ದು, ಸೋನಲ್ ಮೊಂತೆರೋ ಜೋಡಿಯಾಗಿ ಸಾಥ್ ನೀಡಿರುವ ಈ ಚಿತ್ರದಲ್ಲಿ  ಟ್ವಿಸ್ವ್ ಅಂಡ್ ಟರ್ನಿಂಗ್ ಸೀಕ್ವೇನ್ಸ್ ಗಳಿರೋದು ಟ್ರೈಲರ್ ಝಲಕ್ ನಲ್ಲೇ ಸ್ಪಷ್ಟವಾಗಿದೆ.

Advertisement

ಈಗಾಗಲೇ ತಿಳಿದಿರುವಂತೆ ಬನಾರಸ್ ಚಿತ್ರಕ್ಕೂ ಗಂಗಾ ನದಿಗೂ ಅವಿನಾಭಾವ ಸಂಬಂಧವಿದೆ. ಗಂಗಾ ತಟದಲ್ಲಿ ತೆರೆದುಕೊಳ್ಳುವ  ಈ ಪ್ರೇಮಕಥೆಯ ಬನಾರಸ್ ನ ನಾಯಕ ನಾಯಕಿ ಯನ್ನ ಮತ್ತೆ ಆ  ಮಾಯಗಂಗೆಗೆ ಭೇಟಿ ನೀಡಿದ್ದಾರೆ. ವರ್ಣನೆಗೆ ನಿಲುಕದ ಪೂಜ್ಯ ಸ್ಥಾನ ಪಡೆದುಕೊಂಡಿರುವ ಗಂಗಾ ತೀರದಲ್ಲಿ ಶೂಟಿಂಗ್ ನಡೆಸಿದ್ದ ಬನಾರಸ್ ತಂಡ ಪ್ರಚಾರದ ನಿಮಿತ್ತ ವಾರಾಣಸಿಗೆ ತೆರಳಿದ್ದ ಸಂದರ್ಭದಲ್ಲಿ ಮತ್ತೆ ಗಂಗಾ ತಟಕ್ಕೆ ತೆರಳಿದೆ. ಅಲ್ಲಿ ನಡೆಯುವ ಪವಿತ್ರ ಗಂಗಾರತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಜಾತಿ, ಧರ್ಮಗಳ ಹಂಗಿಲ್ಲದೇ ಭಕ್ತಿಯ ಭಾವದಿಂದ ಗಂಗಾ ಮಾತೆಗೆ ನಮಿಸಿದ್ದಾರೆ.

ನವೆಂಬರ್ 4 ರಂದು ದೇಶಾದ್ಯಂತ ತೆರೆ ಕಾಣಲಿರುವ ಬನಾರಸ್ ತಂಡ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದೆ. ರಾಜ್ಯಗಳನ್ನ ಸುತ್ತಿ ಮಾಧ್ಯಮದವರೊಂದಿಗೆ ಮುಖಾಮುಖಿಯಾಗಿ, ಸಿನೆಮಾದ ಕುರಿತ ಕುತೂಹಲಕಾರಿ ಮಾಹಿತಿಯನ್ನ ಹಂಚಿಕೊಳ್ತಿದ್ದಾರೆ. ಜೊತೆಗೆ ಆ ರಾಜ್ಯಗಳಲ್ಲಿರುವ ಧಾರ್ಮಿಕ ಕ್ಷೇತ್ರಕ್ಕೂ ಭೇಟಿ ನೀಡಿ ಧರ್ಮದ ಹಂಗಿಲ್ಲದೇ ಭಕ್ತಿ ಭಾವದಿಂದ ನಮಿಸಿ, ತಮ್ಮ ಚೊಚ್ಚಲ ಸಿನೆಮಾಗೆ ಆಶೀರ್ವಾದ ಪಡೆದುಕೊಳ್ತಿದ್ದಾರೆ.

ತಿಲಕ್ ರಾಜ್ ಬಲ್ಲಾಳ್ ನಿರ್ಮಾಣದೊಂದಿಗೆ ಅದ್ದೂರಿಯಾಗಿ ತಯಾರಾದ ಬನಾರಸ್ ಗೆ ಅದ್ವೈತ್ ಗುರುಮೂರ್ತಿ ಛಾಯಾಗ್ರಹಣ, ಅಜನೀಶ್ ಬಿ ಲೋಕನಾಥ್ ಸಂಗೀತ ನಿರ್ದೇಶನವಿದ್ದು, ದೇವರಾಜ್, ಅಚ್ಯುತಕುಮಾರ್, ಸುಜಯ್ ಶಾಸ್ತ್ರಿ, ಸ್ವಪ್ನ ರಾಜ್, ಬರ್ಕತ್ ಆಲಿ, ಚಿರಂತ್, ರೋಹಿತ್ ಸೇರಿದಂತೆ ನುರಿತ ತಾರಾಗಣ ಮತ್ತು ಪ್ರತಿಭಾನ್ವಿತ ತಂತ್ರಜ್ಞರ ತಂಡ ಬನಾರಸ್ ಗೆ ಸಾಥ್ ಕೊಟ್ಟಿದೆ.

Advertisement

Udayavani is now on Telegram. Click here to join our channel and stay updated with the latest news.

Next