Advertisement

Banaras Hindu University: ನದಿಗಳ ಶುದ್ದೀಕರಣಕ್ಕೆ ಹೊಸ ಲ್ಯಾಬ್‌ ಆರಂಭ

02:00 AM Aug 23, 2024 | Team Udayavani |

ಹೊಸದಿಲ್ಲಿ: ದೇಶದಲ್ಲಿ ಸಣ್ಣ ನದಿಗಳ ಪುನರುಜ್ಜೀವ ನಕ್ಕೆ, ಸದಾ ಶುದ್ಧವಾಗಿಟ್ಟುಕೊಳ್ಳಲು, ಆರೋಗ್ಯಯುತ ಗೊಳಿಸಲು ಕೇಂದ್ರ ಸರಕಾರ ಬಲವಾದ ಹೆಜ್ಜೆಯನ್ನಿ ಟ್ಟಿದೆ. ಬಿಎಚ್‌ಯು(ಬನಾರಸ್‌ ಹಿಂದೂ ವಿಶ್ವ ವಿದ್ಯಾ ಲಯ)ಐಐಟಿಯಲ್ಲಿ ಪ್ರಯೋಗಾಲಯ ಸಿದ್ಧವಾಗಿದೆ.

Advertisement

ಎಸ್‌ಎಲ್‌ಸಿಆರ್‌ (ಸ್ಮಾಲ್‌ ಲ್ಯಾಬೋರೇಟರಿ ಆನ್‌ ಕ್ಲೀನ್‌ ರಿವರ್ಸ್‌) ಎಂಬ ಪ್ರಯೋಗಾಲಯದಲ್ಲಿ ನವೀನ ತಂತ್ರಜ್ಞಾನದಿಂದ ನದಿಗಳನ್ನು ಪುನರುಜ್ಜೀವನ ಗೊಳಿಸುವ ವ್ಯವಸ್ಥೆ ಸಿದ್ಧಪಡಿಸಲಾಗಿದೆ. ಕೇಂದ್ರ ಜಲಶಕ್ತಿ ಆಯೋಗ ಇದಕ್ಕೆ 16.80 ಕೋಟಿ ರೂ., ಸಹಭಾಗಿತ್ವ ವಹಿಸಿರುವ ಡೆನ್ಮಾರ್ಕ್‌ 5 ಕೋಟಿ ರೂ. ನೆರವು ನೀಡಿದೆ. ಸರಕಾರಿ ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳು, ಸ್ಥಳೀಯರ ನೆರವಿನೊಂದಿಗೆ ಶುದ್ಧವಾಗಿ ಟ್ಟುಕೊಳ್ಳುವ ಕ್ರಮಗಳಿಗೆ ಚಾಲನೆ ನೀಡಲಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next