Advertisement

ಜೀವನದಲ್ಲಿ ಜಿಗುಪ್ಸೆ : ನೇಣು ಬಿಗಿದುಕೊಂಡು ವ್ಯಾಪಾರಿ ಆತ್ಮಹತ್ಯೆ

06:40 PM Sep 24, 2021 | Team Udayavani |

ಬನಹಟ್ಟಿ : ಮನೆಯಲ್ಲಿನ ಬೆಡ್‌ರೂಮಿನಲ್ಲಿದ್ದ ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದುಕೊಂಡು ಕಿರಾಣಿ ವ್ಯಾಪಾರಿಯೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಬನಹಟ್ಟಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

Advertisement

ಬನಹಟ್ಟಿಯ ಉಮದಿ ಲೇನ್‌ದಲ್ಲಿರುವ ಹೆಸರಾಂತ ಕಿರಾಣಿ ಸಗಟು ವ್ಯಾಪಾರಿ ಶ್ರೀಶೈಲ ಸಿದ್ರಾಯಪ್ಪ ಸಜ್ಜನ(48) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಈತ ಗುರುವಾರ (ಸೆ.23) ದಂದು ಮಧ್ಯಾಹ್ನ ೧ ಗಂಟೆ ಸುಮಾರಿಗೆ ಮನೆಯಲ್ಲಿನ ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದುಕೊಂಡಿದ್ದಾನೆ, ಘಟನೆ ನಡೆದ ಕೂಡಲೇ ಆತನನ್ನು ರಾಮಪೂರದ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ದಾಖಲಿಸಿದ್ದಾರೆ ಆದರೆ ಚಿಕಿತ್ಸೆ ಫಲಕಾರಿಯಾಗದೇ ಶುಕ್ರವಾರ (ಸೆ.24) ದಂದು ಬೆಳಗಿನ ಜಾವ 4 ಗಂಟೆ ಸುಮಾರಿಗೆ ಮೃತಪಟ್ಟಿರುವದಾಗಿ ಪೊಲೀಸ್ ವರದಿಯಿಂದ ತಿಳಿದು ಬಂದಿದೆ.

ಈತನ ಕಿರಾಣಿ ಅಂಗಡಿಯು ಕಳೆದೊಂದು ವರ್ಷದಿಂದ ವ್ಯಾಪಾರ ಸರಿಯಾಗಿ ನಡೆಯದ ಕಾರಣ ಮಾನಸಿಕವಾಗಿ ಬಳಲಿ ಜೀವನದಲ್ಲಿ ಜಿಗುಪ್ಸೆಗೊಂಡು ತನ್ನ ಮನೆಯ ಮೂರನೇಯ ಮಹಡಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ಮೃತನ ಪತ್ನಿ ಸರೋಜಿನಿ ಸಜ್ಜನ ದೂರಿನಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ :ಬೆಳಗಾವಿ : ಗದ್ದೆಯಲ್ಲಿ ಹೆಣ್ಣು ಮಗು ಬಿಸಾಕಿದ ಪಾಪಿಗಳು

Advertisement

Udayavani is now on Telegram. Click here to join our channel and stay updated with the latest news.

Next