Advertisement

ಜಾಬ್ಡೇಕರ್‌ ಗಮನಕ್ಕೆ ತಾರದೇ ಸುದ್ದಿ ವಾಹಿನಿಗಳಿಗೆ ನಿರ್ಬಂಧ: ಎನ್‌ಬಿಎ ಟೀಕೆ

09:55 AM Mar 10, 2020 | Hari Prasad |

ಹೊಸದಿಲ್ಲಿ: ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವರ ಗಮನಕ್ಕೆ ತಾರದೆಯೇ ಕೇರಳದಲ್ಲಿ ಮಲಯಾಳಂ ಭಾಷೆಯ ಎರಡು ಸುದ್ದಿ ವಾಹಿನಿಗಳಿಗೆ ನಿರ್ಬಂಧ ಹೇರಿದ್ದನ್ನು ನ್ಯಾಷನಲ್‌ ಬ್ರಾಡ್‌ಕಾಸ್ಟರ್ ಅಸೋಸಿಯೇಷನ್‌ ವಿರೋಧಿಸಿದೆ.

Advertisement

ಈ ಕುರಿತು ಮಾತನಾಡಿರುವ ಸಂಘದ ಅಧ್ಯಕ್ಷ ರಜತ್‌ ಶರ್ಮಾ, ‘ಸಚಿವ ಪ್ರಕಾಶ್‌ ಜಾಬ್ಡೇಕರ್‌ ಅವರ ಗಮನಕ್ಕೆ ತಾರದೆಯೇ ಮಲಯಾಳಂನ ಏಷ್ಯಾನೆಟ್‌ ನ್ಯೂಸ್‌ ಮತ್ತು ಮೀಡಿಯಾ ಒನ್‌ ಎಂಬ ಸುದ್ದಿವಾಹಿನಿಗಳ ಪ್ರಸಾರವನ್ನು ನಿಷೇಧಿಸುವ ಆದೇಶ ನೀಡಲಾಗಿತ್ತು. ಈ ಕುರಿತು ಸೂಕ್ತ ತನಿಖೆಗೆ ಸಚಿವರು ಆದೇಶಿಸಬೇಕು ಮತ್ತು ತನಿಖಾ ವರದಿಯನ್ನು ನಮ್ಮೊಂದಿಗೆ ಹಂಚಿಕೊಳ್ಳಬೇಕು’ ಎಂದು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next