Advertisement

ಜಂಬೂ ಸವಾರಿ ಅಲ್ಲ.. ಬಂಬೂ ಸವಾರಿ; ಸಸ್ಪೆನ್ಸ್‌-ಕ್ರೈಂ ಥ್ರಿಲ್ಲರ್‌ ಚಿತ್ರಕ್ಕೆ ಚಾಲನೆ

04:08 PM Apr 11, 2022 | Team Udayavani |

ಜಂಬೂ ಸವಾರಿ ಎಂಬ ಪದದ ಬಗ್ಗೆ ಬಹುತೇಕರು ಕೇಳಿರುತ್ತೀರಿ. ಇಲ್ಲೊಂದು ಚಿತ್ರತಂಡ ತಮ್ಮ ಸಿನಿಮಾಕ್ಕೆ “ಬಂಬೂ ಸವಾರಿ’ ಅಂಥ ಹೆಸರಿಟ್ಟಿದೆ. ತಾಂಡವ ರಾಮ, ವರ್ಧನ್‌, ದೀಪಕ್‌ ವಿ, ಆದ್ಯ ಪ್ರಿಯಾ, ಅಭಿಸಾರಿಕಾ ಸೇರಿದಂತೆ ಬಹುತೇಕ ಬಹುತೇಕ ಹೊಸ ಪ್ರತಿಭೆಗಳು ಮುಖ್ಯ ಭೂಮಿಕೆಯಲ್ಲಿ ಅಭಿನಯಿಸುತ್ತಿರುವ “ಬಂಬೂ ಸವಾರಿ’ ಸಿನಿಮಾದ ಮುಹೂರ್ತ ರಾಮನವಮಿ ಹಬ್ಬದ ಸಂದರ್ಭದಲ್ಲಿ ನೆರವೇರಿತು.

Advertisement

ನಿರ್ದೇಶಕ ಸಿಂಪಲ್‌ ಸುನಿ, ಕೆ. ಎಂ ಚೈತನ್ಯ, ನಟರಾದ ವಿನೋದ್‌ ಪ್ರಭಾಕರ್‌, ಶ್ರೀನಗರ ಕಿಟ್ಟಿ, ಶಾಸಕ ಕೃಷ್ಣ ಭೈರೇಗೌಡ ಮೊದಲಾದವರು ಚಿತ್ರದ ಮುಹೂರ್ತ ಸಮಾರಂಭದಲ್ಲಿ ಹಾಜರಿದ್ದು, ಚಿತ್ರೀಕರಣಕ್ಕೆ ಚಾಲನೆ ನೀಡಿದರು.

ಈ ಹಿಂದೆ “ಕೋಲಾರ’, “ಇಂಗ್ಲಿಷ್‌ ಮಂಜ’ ಸಿನಿಮಾಗಳನ್ನು ನಿರ್ದೇಶಿಸಿರುವ ಆರ್ಯ ಎನ್‌. ಮಹೇಶ್‌ ಔಟ್‌ ಆ್ಯಂಡ್‌ ಔಟ್‌ ಸಸ್ಪೆನ್ಸ್‌ ಕಂ ಕ್ರೈಂ-ಥ್ರಿಲ್ಲರ್‌ ಕಥಾಹಂದರ ಹೊಂದಿರುವ “ಬಂಬೂ ಸವಾರಿ’ ಚಿತ್ರಕ್ಕೆ ಆ್ಯಕ್ಷನ್‌-ಕಟ್‌ ಹೇಳುತ್ತಿದ್ದಾರೆ. ಉಳಿದಂತೆ ನಾಗೇಂದ್ರ ಅರಸ್‌, ಬಾಲರಾಜ್‌ ವಾಡಿ, ಡಾ. ವಿ. ನಾಗೇಂದ್ರ ಪ್ರಸಾದ್‌ ಚಿತ್ರದ ಬಳಗದಲ್ಲಿದ್ದಾರೆ.

“ಬಂಬೂ ಸವಾರಿ’ ಚಿತ್ರದ ಹಾಡುಗಳಿಗೆ ಬಿ. ಆರ್‌ ಹೇಮಂತ್‌ ಕುಮಾರ್‌ ಸಂಗೀತ ಸಂಯೋಜನೆಯಿದ್ದು, ಡಾ. ವಿ. ನಾಗೇಂದ್ರ ಪ್ರಸಾದ್‌, ಸಿಂಪಲ್‌ ಸುನಿ, ವಿಜಯ್‌ ಟಿ. ಪಿ ಸಾಹಿತ್ಯವಿದೆ. ಚಿತ್ರಕ್ಕೆ ಮಂಜು ಛಾಯಾಗ್ರಹಣ, ಗಿರೀಶ್‌ ಕುಮಾರ್‌ ಕೆ. ಸಂಕಲನವಿದೆ. “ಇನ್ಸ್ಟಾಂಟ್ ಸಿನಿ ಕ್ರಿಯೇಷನ್ಸ್‌’ ಬ್ಯಾನರ್‌ನಲ್ಲಿ ಡೇವಿಡ್‌ ಆರ್‌. ಈ ಚಿತ್ರಕ್ಕೆ ಬಂಡವಾಳ ಹೂಡಿ ನಿರ್ಮಿಸುತ್ತಿದ್ದಾರೆ. ಕಲ್ಟ್ ಜಾನರ್‌ ನಲ್ಲಿ ಮೂಡಿಬರುತ್ತಿರುವ “ಬಂಬೂ ಸವಾರಿ’ ಸಿನಿಮಾವನ್ನು ಬೆಂಗಳೂರು ಸುತ್ತಮುತ್ತ ಚಿತ್ರೀಕರಿಸಲು ಚಿತ್ರತಂಡ ಪ್ಲಾನ್‌ ಹಾಕಿಕೊಂಡಿದೆ

Advertisement

Udayavani is now on Telegram. Click here to join our channel and stay updated with the latest news.

Next