Advertisement

ಉದ್ಘಾಟನೆ ಮುನ್ನವೇ ಬಸ್‌ನಿಲ್ದಾಣ ಕಾರ್ಯಾರಂಭ

05:19 PM Feb 15, 2021 | |

ಸಿರಗುಪ್ಪ: ನಗರದ ಹೃದಯಭಾಗದಲ್ಲಿ·ಮೂರು ವರ್ಷಗಳಿಂದ ನಿರ್ಮಾಣವಾಗುತ್ತಿದ್ದಬಸ್‌ನಿಲ್ದಾಣದ ಕಾಮಗಾರಿ ಅಂತೂ ಇಂತಮುಗಿದಿದ್ದು, ಉದ್ಘಾಟನೆಗೆ ಮುನ್ನವೇಕಾರ್ಯಾರಂಭ ಮಾಡಿದ್ದು, ನಿಲ್ದಾಣದ ಒಳಗೆಬಸ್‌ಗಳು ನಿಲ್ಲುತ್ತಿದ್ದು, ನಿಲ್ದಾಣದ ಒಳಗೆ ಅಂಗಡಿಮುಂಗಟ್ಟುಗಳು ಪ್ರಾರಂಭವಾಗಿದ್ದು, ನಿಲ್ದಾಣದಲ್ಲಿಜನ ಜಂಗುಳಿ ಕಂಡು ಬರುತ್ತಿದೆ.

Advertisement

ರೂ. 2.50 ಕೋಟಿ ವೆಚ್ಚದಲ್ಲಿ ನಗರದ ಹೃದಯಭಾಗದಲ್ಲಿರುವ ಕೇಂದ್ರ ಬಸ್‌ನಿಲ್ದಾಣದ ಕಾಮಗಾರಿಗೆಅಂದಿನ ಸಾರಿಗೆ ಸಚಿವ ಎಚ್‌.ಎಂ. ರೇವಣ್ಣ ಮಾ.13, 2018ರಂದು ಭೂಮಿಪೂಜೆ ನೆರವೇರಿಸಿದ್ದರು.ಆದರೆ ರಾಜಕೀಯ ನಾಯಕರ ಒಳಜಗಳದಿಂದ18 ತಿಂಗಳಲ್ಲಿಯೇ ಮುಗಿಯಬೇಕಿದ್ದ ನಿಲ್ದಾಣದಕಾಮಗಾರಿ ಮೂರು ವರ್ಷಕ್ಕೆ ಮುಗಿದಿದ್ದು,ಬಸ್ಸಿಗಾಗಿ ಕಾಯುವ ಜನ ನಿಲ್ದಾಣದಲ್ಲಿಯೇಕುಳಿತುಕೊಳ್ಳಲು ಅನುಕೂಲವಾಗಿದೆ.

ಕಳೆದ ಮೂರು ವರ್ಷಗಳಿಂದ ಬಸ್ಸಿಗಾಗಿರಸ್ತೆಯಲ್ಲಿಯೇ ಮಳೆ, ಚಳಿ, ಬಿಸಿಲು ಎನ್ನದೆಕಾಯುತ್ತಿದ್ದ ಪ್ರಯಾಣಿಕರಿಗೆ ಬಸ್‌ನಿಲ್ದಾಣದ
ಕಾಮಗಾರಿ ಮುಗಿದಿದ್ದು ರಸ್ತೆಯಲ್ಲಿ ನಿಂತು ಬಸ್ಸಿಗಾಗಿಕಾಯುವ ಪರಿಸ್ಥಿತಿ ತಪ್ಪಿದಂತಾಗಿದೆ. ಬಸ್‌ನಿಲ್ದಾಣದಕಾಮಗಾರಿ ಮುಗಿದಿದ್ದು, ಸಣ್ಣಪುಟ್ಟ ಕಾಮಗಾರಿಗಳುಬಾಕಿ ಇದೆ. ಬಾಕಿ ಕಾಮಗಾರಿಗಳನ್ನು ಮುಗಿಸಿಶೀಘ್ರವೇ ಬಸ್‌ನಿಲ್ದಾಣವನ್ನು ಲೋಕಾರ್ಪಣೆಮಾಡಲು ಕ್ರಮ ಕೈಗೊಳ್ಳಲಾಗುವುದೆಂದು ಬಳ್ಳಾರಿಸಾರಿಗೆ ವಿಭಾಗದ ನಿಯಂತ್ರಣಾಧಿ ಕಾರಿ ಎಸ್‌.ಆರ್‌.ಚಂದ್ರಶೇಖರ್‌ ತಿಳಿಸಿದ್ದಾರೆ.

ಸಾರ್ವಜನಿಕರ ಅನುಕೂಲಕ್ಕಾಗಿರೂ. 2.50ಕೋಟಿ ವೆಚ್ಚದಲ್ಲಿನಿರ್ಮಾಣವಾಗಿರುವ ನೂತನ ಬಸ್‌ನಿಲ್ದಾಣವನ್ನು ಫೆಬ್ರವರಿ ತಿಂಗಳ ಅಂತ್ಯದೊಳಗೆಲೋಕಾರ್ಪಣೆ ಮಾಡಲು ಸಾರಿಗೆ ಇಲಾಖೆಯಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮಕೈಗೊಳ್ಳಲಾಗುವುದು.
ಎಂ.ಎಸ್‌. ಸೋಮಲಿಂಗಪ್ಪ, ಶಾಸಕ

–ಆರ್‌. ಬಸವರೆಡ್ಡಿ ಕರೂರು

Advertisement
Advertisement

Udayavani is now on Telegram. Click here to join our channel and stay updated with the latest news.

Next