Advertisement

ಪುಕ್ಕಟ್ಟೆ ಪ್ರಚಾರ ಪಡೆಯುವವರಿಗೆ ಪ್ರತಿಕ್ರಿಯಿಸಲ್ಲ

07:49 PM Feb 24, 2022 | Team Udayavani |

ಬಳ್ಳಾರಿ: ಬಳ್ಳಾರಿ ಮಹಾನಗರ ಪಾಲಿಕೆಯಲ್ಲಿಕಾಂಗ್ರೆಸ್‌ ಪಕ್ಷಕ್ಕೆ ಜನಾದೇಶ ಲಭಿಸಿದೆ. ಜನಾದೇಶಕ್ಕೆತಲೆಬಾಗುವಂಥ ಮನುಷ್ಯ ನಾನು. ಪಾಲಿಕೆಯಯಾವೊಬ್ಬ ಸದಸ್ಯನ ಖರೀದಿಗೂ ನಾವುಮುಂದಾಗಿಲ್ಲ. ಪುಕ್ಕಟ್ಟೆ ಪ್ರಚಾರ ಪಡೆದುಕೊಳ್ಳುವಮಂದಿಗೆ ನಾನು ಪ್ರತಿಕ್ರಿಯಿಸಲ್ಲ ಎಂದು ಸಾರಿಗೆ,ಜಿಲ್ಲಾ ಉಸ್ತುವಾರಿ ಸಚಿವ ಬಿ. ಶ್ರೀರಾಮುಲುಸ್ಪಷ್ಟಪಡಿಸಿದರು.

Advertisement

ನಗರದಲ್ಲಿ ಬುಧವಾರ ಬೆಳಗಿನ ಜಾವವಾಯುವಿಹಾರದ ನಿಮಿತ್ತ ಕಾಲ್ನಡಿಗೆಯಲ್ಲೇ ನಗರ ಪ್ರದಕ್ಷಿಣೆ ಹಾಕಿದ ಬಳಿಕಸುದ್ದಿಗಾರರೊಂದಿಗೆ ಮಾತನಾಡಿದರು.ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರಾಮುಲುಎನ್ನುವ ವ್ಯಕ್ತಿ ಎಂದಿಗೂ ಹಿಂಬಾಗಿಲಿನಿಂದಅ ಧಿಕಾರ ಪಡೆದವನಲ್ಲ.

ಬೇಕಾದರೆ ನನ್ನಇತಿಹಾಸ ತೆಗೆದು ನೋಡಿ. ಜನಾದೇಶಕ್ಕೆತಲೆಬಾಗುವ ಮನುಷ್ಯ ನಾನು. ಕೇವಲರಾಜಕಾರಣಕ್ಕಾಗಿ, ಪುಕ್ಕಟ್ಟೆ ಪ್ರಚಾರಕ್ಕಾಗಿ ಯಾರೋಒಬ್ಬರು ನಾವು ಕುದುರೆ ವ್ಯಾಪಾರ ಮಾಡುತ್ತಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ. ಯಾರೂ ಆ ರೀತಿ ಮಾಡೋಕೆ ಹೋಗಲ್ಲ. ಬಳ್ಳಾರಿ ಜನರು ಅವರಿಗೆ(ಕಾಂಗ್ರೆಸ್‌ ಪಕ್ಷಕ್ಕೆ) ಸ್ಪಷ್ಟ ಬಹುಮತ ನೀಡಿದ್ದಾರೆ.

ಪಾಲಿಕೆಯಲ್ಲಿ ಅವರೇ ಆಡಳಿತ ನಡೆಸಲಿ,ಅದಕ್ಕಾಗಿ ಮೇಯರ್‌-ಉಪಮೇಯರ್‌ಗಳನ್ನುಆಯ್ಕೆ ಮಾಡಲಿ ಹೊರತು, ಅವರಲ್ಲಿರುವಸದಸ್ಯರು ನಮ್ಮಲ್ಲಿ ಬರುವಂತೆ ಕರೆಯುವಪ್ರಶ್ನೆಯೇ ಇಲ್ಲ. ನಾವೇನೇ ಇದ್ದರೂ ಸಹ ಜನರುಕೊಟ್ಟಿರುವ ಆದೇಶಕ್ಕೆ ತಲೆಬಾಗುತ್ತೇವೆ ಎಂದುಸ್ಪಷ್ಟಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next