Advertisement

ಕೇಸರಿ-ಹಿಜಾಬ್‌ ವಿವಾದ ಕೊನೆಯಾಗಲೆಂದು ಪ್ರಾರ್ಥನೆ

02:36 PM Feb 18, 2022 | Team Udayavani |

ಬಳ್ಳಾರಿ: ರಾಜ್ಯದಲ್ಲಿ ಸೃಷ್ಟಿಯಾಗಿರುವ ಹಿಜಾಬ್‌ ಮತ್ತುಕೇಸರಿ ಶಾಲಿನ ವಿವಾದ ಕೊನೆಗೊಳ್ಳಲು ಒಂದು ಕಡೆ ಸರ್ಕಾರನ್ಯಾಯಾಯಲಯದ ಮೊರೆ ಹೋಗಿದ್ದರೆ ಮತ್ತೂಂದು ಕಡೆಜನರು ದೇವರ ಮೊರೆ ಹೋಗಿದ್ದಾರೆ.

Advertisement

ಜಿಲ್ಲೆಯ ಸಿರುಗುಪ್ಪತಾಲೂಕು ರಾರಾವಿ ಗ್ರಾಮದಲ್ಲಿ ಭರತ ಹುಣ್ಣಿಮೆಯಂದುನಡೆದ ಹುತ್ತಿನ ಎಲ್ಲಮ್ಮ ದೇವಿಯ ರಥೋತ್ಸವದಲ್ಲಿ ಸಾರ್ವಜನಿಕರು ಬಾಳೆಹಣ್ಣಿನ ಮೇಲೆ ಹಿಂದು ಮುಸ್ಲಿಂ ಒಂದೆ.ಕೇಸರಿ-ಹಿಜಾಬ್‌ ವಿವಾದ ಕೊನೆಯಾಗಲಿ ಸೌಹಾರ್ದತೆಉಳಿಯಲಿ ಎಂದು ಬರೆದು ರಥಕ್ಕೆ ಎಸೆದು ದೇವರಲ್ಲಿ ಪ್ರಾರ್ಥಿಸಿದ್ದಾರೆ.

ಈ ಮೂಲಕ ವಿವಾದ ಕೊನೆಯಾಗಿ ಈ ಮೊದಲಿನಂತೆ ಹಿಂದು-ಮುಸ್ಲಿಂ ನಡುವಿನ ಸೌಹಾರ್ದತೆಮತ್ತಷ್ಟು ಗಟ್ಟಿಯಾಗಲಿ ಎಂದು ಅವರು ಕೋರಿದ್ದಾರೆ ಎಂದುಗ್ರಾಮದ ಯುವಕ ಸುಭಾನ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next