Advertisement

ಪ್ರಮುಖ ವೃತ್ತ-ಉದ್ಯಾನವನಕ್ಕೆ ಪುನೀತ್‌ ಹೆಸರಿಡಿ

05:19 PM Feb 01, 2022 | Team Udayavani |

ಬಳ್ಳಾರಿ: ಕನ್ನಡ ಚಿತ್ರರಂಗದ ಮೇರುನಟ,ಸಮಾಜ ಸೇವಕ ಪವರ್‌ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ಅವರ ಅಕಾಲಿಕ ನಿಧನದಿಂದರಾಜ್ಯದ ಕನ್ನಡಾಭಿಮಾನಿಗಳಿಗೆ ತುಂಬಲಾರದನಷ್ಟವಾಗಿದ್ದು, ಅವರ ಸವಿನೆನಪಿಗಾಗಿ ಬಳ್ಳಾರಿಮಹಾನಗರ ಪಾಲಿಕೆ ಯಾವುದಾದರೂಪ್ರಮುಖ ವೃತ್ತ, ರಸ್ತೆ, ಉದ್ಯಾನವನಗಳಿಗೆಪುನೀತ್‌ ಅವರ ಹೆಸರನ್ನು ನಾಮಕರಣಮಾಡಬೇಕು ಎಂದು ಪುನೀತ್‌ ಅಭಿಮಾನಿಗಳಪರವಾಗಿ ಕರ್ನಾಟಕ ಏಕೀಕರಣ ರಕ್ಷಣಾಸಮಿತಿ, ಕನ್ನಡಪರ ಒಕ್ಕೂಟದ ರಾಜ್ಯಘಟಕ ವತಿಯಿಂದ ಪಾಲಿಕೆ ಅ ಧಿಕಾರಿಗಳಿಗೆಸೋಮವಾರ ಮನವಿ ಸಲ್ಲಿಸಲಾಯಿತು.

Advertisement

ಬಳ್ಳಾರಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿಯಾವುದಾದರೂ ಒಂದು ಪ್ರತಿಷ್ಠಿತ ವೃತ್ತದಲ್ಲಿಪುನೀತ್‌ ರಾಜ್‌ ಕುಮಾರ್‌ ರವರ ಪುತ್ಥಳಿಯನ್ನು ಸ್ಥಾಪಿಸಿ, ಒಂದು ಮಾದರಿ ವೃತ್ತವನ್ನಾಗಿನಿರ್ಮಿಸಿ, ಅಭಿವೃದ್ಧಿಪಡಿಸಿ, ಅಭಿಮಾನಿಗಳಮನದಲ್ಲಿ ಚಿರಕಾಲ ಪುನೀತ್‌ ರಾಜ್‌ ಕುಮಾರ್‌ಅವರು ಉಳಿಯುವಂತೆ ಮಾಡಬೇಕು ಎಂದುಆಗ್ರಹಿಸಿದರು.

ಈ ವೇಳೆ ಕನ್ನಡಪರ ಸಂಘಟನೆಗಳ ಮುಖಂಡರಾದ ತಿಮ್ಮಪ್ಪ ಜಿ, ಬಿ. ಕೃಷ್ಣ,ಹುಲಿಗೇಶ, ರಮೇಶ್‌ ಬಿ, ಬಿ.ತಿಪ್ಪೇಸ್ವಾಮಿ, ಬಿ.ನೆಟ್ಟಕಂಟಯ್ಯ, ವೀರೇಶ್‌, ಮುರಳಿ ಮೋಹನ್‌ ಆರ್‌,ತಿಪ್ಪೇಸ್ವಾಮಿ, ಸಿದ್ದಪ್ಪ, ಮೊಹಮ್ಮದ್‌ ಜಾಫರ್‌,ಹೊನ್ನೂರಸ್ವಾಮಿ, ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next