Advertisement

ಶಾಖಾ ಮಠಗಳ ಉತ್ತರಾಧಿಕಾರಿಗಳ ಅಧಿಕಾರ ಹಸ್ತಾಂತರ

03:45 PM Jun 27, 2022 | Team Udayavani |

ಬಳ್ಳಾರಿ: ನಗರದ ಕೊಟ್ಟೂರುಸ್ವಾಮಿ ಮಠದಲ್ಲಿ ಶಾಖಾಮಠಗಳ ಉತ್ತರಾಧಿ ಕಾರಿಗಳ ಅಧಿ ಕಾರ ಹಸ್ತಾಂತರಕಾರ್ಯಕ್ರಮ ಭಾನುವಾರ ನಡೆಯಿತು.

Advertisement

ಕೊಟ್ಟೂರು ಬಸವಲಿಂಗ ಮಹಾಸ್ವಾಮಿಗಳು, ಮಠದಶಾಖಾ ಮಠಗಳಾದ ಸೋಮಸಮುದ್ರ ಗ್ರಾಮದ ವಿರಕ್ತಮಠಕ್ಕೆ ಸಿದ್ದಲಿಂಗ ಸ್ವಾಮಿಗಳು, ಶ್ರೀಧರಗಡ್ಡೆ ವಿರಕ್ತಮಠಕ್ಕೆಮರಿಕೊಟ್ಟೂರು ಸ್ವಾಮಿಗಳು, ಕುರುಗೋಡು ವಿರಕ್ತ ಮಠಕ್ಕೆನಿರಂಜನ ಪ್ರಭು ಸ್ವಾಮಿಗಳು, ಸಿರಿಗೇರಿ-ಬೂದಗುಂಪಾಮಠಗಳಿಗೆ ಸಿದ್ದೇಶ್ವರ ಸ್ವಾಮಿಗಳನ್ನು, ದರೂರು ಮಠಕ್ಕೆಕೊಟ್ಟೂರುಸ್ವಾಮಿಗೆ ಲಿಂಗೈಕ್ಯ ಡಾ| ಸಂಗನಬಸವಮಹಾಸ್ವಾಮಿಗಳ ಅಪೇಕ್ಷೆಯಂತೆ ಅಧಿಕಾರವನ್ನುಹಸ್ತಾಂತರಿಸಲಾಯಿತು.

ಈ ವೇಳೆ ಕಾರ್ಯಕ್ರಮದಲ್ಲಿಮುಖ್ಯ ಅತಿಥಿಗಳಾದ ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು, ಎಲ್ಲ ಶಾಖಾ ಮಠಗಳ ಉತ್ತರಾಧಿಕಾರಿಗಳಿಗೆ ಸಂಪುಟ ಪತ್ರವನ್ನು ಹಸ್ತಾಂತರಿಸಿದರು. ಬಳಿಕಮಾತನಾಡಿದ ಅವರು, ಲಿಂ. ಸಂಗನಬಸವ ಮಹಾಸ್ವಾಮಿಗಳು, ತಮ್ಮ ಐವತ್ತು ವರ್ಷಗಳ ಅಧಿ ಕಾರದಲ್ಲಿಮಾಡಿದ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ,ಸಾಹಿತ್ಯಿಕ ಕಾರ್ಯಕ್ರಮಗಳನ್ನು ಮೆಲುಕು ಹಾಕಿದರು.

Advertisement

Udayavani is now on Telegram. Click here to join our channel and stay updated with the latest news.

Next