Advertisement

ಕೋವಿಡ್ ವಾರಿಯರ್ಸ್ ಗೆ  ಸನ್ಮಾನ-ಸಸಿ ವಿತರಣೆ

06:32 PM Jun 20, 2020 | Naveen |

ಬಳಗನೂರು: ಪಟ್ಟಣದ ಶ್ರೀ ಬಸವೇಶ್ವರ ವೃತ್ತದಲ್ಲಿ ಯೂತ್‌ ಮೂಮೆಂಟ್‌ ವತಿಯಿಂದ ಕೋವಿಡ್ ವಾರಿಯರ್ಸ್ ಗೆ ಅಭಿನಂದನೆ, ರಕ್ತದಾನ ಶಿಬಿರ ಹಾಗೂ ಸಸಿ ನೆಡುವ ಕಾರ್ಯಕ್ರಮ ನಡೆಯಿತು.

Advertisement

ಯುವ ಮುಖಂಡ ಪ್ರಸನ್ನಕುಮಾರ ಪಾಟೀಲ, ಯುವ ಮುಖಂಡ ಕೆ. ರಾಘವೇಂದ ಗುತ್ತೇದಾರ ಸಸಿಗೆ ನೀರುಣಿ, ರೈತರಿಗೆ ಸಸಿ ವಿತರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕೋವಿಡ್ ಮಹಾಮಾರಿ ತಡೆಗಟ್ಟಲು ಆರೋಗ್ಯ ಸೇವೆ ಮತ್ತು ಜಾಗೃತಿ ಕಾರ್ಯದಲ್ಲಿ ತೊಡಗಿರುವ ಆರೋಗ್ಯ ಇಲಾಖೆ ಅಧಿಕಾರಿಗಳು, ಆರೋಗ್ಯ ಸಹಾಯಕರು, ಆಶಾ ಕಾರ್ಯಕರ್ತೆಯರು, ಪಪಂ ಪೌರಕಾರ್ಮಿಕರು, ಜೆಸ್ಕಾಂ ಅಧಿಕಾರಿಗಳು, ಸಿಬ್ಬಂದಿ, ಪತ್ರಕರ್ತರು ಇತರೆ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಸನ್ಮಾನಿಸಲಾಯಿತು. ಚೀನಾದ ಗಡಿಯಲ್ಲಿ ಹುತಾತ್ಮರಾದ ಯೋಧರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಬಳಗಾನೂರು ಹಾಗೂ ಮಸ್ಕಿ ನಗರದ ಯುತ್‌ ಮೂಮೆಂಟ್‌ ಯುವಕರು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿದರು. ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಮೌನೇಶ ಪೂಜಾರ, ಡಾ| ದೌಲಸಾಬ್‌ ಮುದ್ದಾಪುರ, ಮುಖಂಡರಾದ ಮಲ್ಲಿಕಾರ್ಜುನ ಬ್ಯಾಳಿ, ಮಲ್ಲಣ್ಣ ಅಂಬಾಡಿ, ವೀರೇಶ ಕಮತರ, ಮಲ್ಲಿಕಾರ್ಜುನ, ಮಲ್ಲಿಕಾರ್ಜುನ ಗೌಡನಭಾವಿ, ಭರತ ಶೇಠ್, ಎಬಿವಿಪಿ ರಾಜ್ಯದ ಪದಾಧಿಕಾರಿ ಮಲ್ಲಿಕಾರ್ಜುನ, ಸಂಚಾಲಕ ಎಂ.ಬಿ. ನಿರುಪಾದಿ, ಶಶಿ ಹಿರೇಮಠ, ಪಪಂ ಸದಸ್ಯ ರಾಜಶೇಖರ ಶಂಕರಬಂಡಿ, ರಾಕೇಶ ಪಾಟೀಲ, ಚಂದ್ರಶೇಖರ ನಾಯಕ, ಶರಣೇಗೌಡ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next