Advertisement

ಬಜಪೆ: ಸಂಗೀತ ಮನೋಧರ್ಮ ಕಾರ್ಯಾಗಾರ

11:13 PM Apr 17, 2019 | Sriram |

ಬಜಪೆ: ಶಾಸ್ತ್ರೀಯ ಸಂಗೀತವು ಸಂಗೀತ ಕ್ಷೇತ್ರದಲ್ಲಿ ಅತ್ಯುನ್ನತ ಸ್ಥಾನ ಪಡೆದಿದ್ದು,ಎಳೆವೆಯಲ್ಲಿ ಸಂಗೀತವನ್ನು ತದೇಕಚಿತ್ತದಿಂದ ಅಭ್ಯಸಿಸಿದಾಗ ಭವಿಷ್ಯದಲ್ಲಿ ಸಂಗೀತ ಸಾಮ್ರಾಜ್ಞೆಗಳಾಗುವುದರಲ್ಲಿ ಸಂಶಯವಿಲ್ಲ ಎಂದು ವಿದುಷಿ ಸುಚಿತ್ರಾ ಹೊಳ್ಳ ಹೇಳಿದರು.

Advertisement

ಬಜಪೆ ಶಾಂತಿ ಕಲಾ ಕೇಂದ್ರದ ವತಿಯಿಂದ ಶಾಂತಿ ಕಲಾ ಕೇಂದ್ರದಲ್ಲಿ ವಿದುಷಿ ಸುಚಿತ್ರಾ ಹೊಳ್ಳ ಇವರಿಂದ ಆಯ್ದ ಕೃತಿಗಳು ಮತ್ತು ಸಂಗೀತ ಮನೋಧರ್ಮದ ಕಾರ್ಯಾಗಾರ ಹಾಗೂ ಭಜನ್‌ಗಳ ಕಲಿಕೆ ಕಾರ್ಯಕ್ರಮದಲ್ಲಿ ಅವರು
ಮಾತನಾಡಿದರು.

ಕಾರ್ಯಾಗಾರವನ್ನು ರೋಹಿಣಿ ರಾಘವೇಂದ್ರ ಆಚಾರ್‌ ಉದ್ಘಾಟಿಸಿದರು. ಸಂಯೋಜಿಕಿ ಚಂದ್ರಕಲಾ ರವಿರಾಜ ಆಚಾರ್‌ ನಿರೂಪಿಸಿದರು.


Advertisement

Udayavani is now on Telegram. Click here to join our channel and stay updated with the latest news.

Next