Advertisement

ಬಜಪೆ: ಸಂಜೀವಿನಿ ಕಟ್ಟಡಕ್ಕೆ ಶಂಕುಸ್ಥಾಪನೆ 

12:42 PM Dec 15, 2017 | Team Udayavani |

ಬಜಪೆ: ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಯೋಜನೆಯಡಿಯಲ್ಲಿ 2017-18ನೇ ಸಾಲಿನ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿ 13.27 ಲಕ್ಷ ರೂ. ಅಂದಾಜು ವೆಚ್ಚದಲ್ಲಿ ಬಜಪೆ ಗ್ರಾಮ ಪಂಚಾಯತ್‌ ಸಮೀಪ ನಿರ್ಮಾಣವಾಗುವ ಸಂಜೀವಿನಿ ಕಟ್ಟಡಕ್ಕೆ ಶಾಸಕ ಕೆ. ಅಭಯಚಂದ್ರ ಅವರು ಶಂಕುಸ್ಥಾಪನೆ ನೆರವೇರಿಸಿದರು.

Advertisement

ಮಂಗಳೂರು ತಾಲೂಕು ವ್ಯಾಪ್ತಿಯ 10 ಗ್ರಾಮ ಪಂಚಾಯತ್‌ ಗೆ ಈ ಯೋಜನೆಯಡಿಯಲ್ಲಿ ಅವಕಾಶ ಬಂದಿದ್ದು, ಅದರಲ್ಲಿ ಈಗಾಗಲೇ 5 ಗ್ರಾಮ ಪಂಚಾಯತ್‌ಗಳು ಕಾಮಗಾರಿಯನ್ನು ಕೈಗಿತ್ತಿಕೊಂಡಿದೆ. ಈ ಕಟ್ಟಡವು ಸ್ತ್ರೀ ಶಕ್ತಿ ಗುಂಪುಗಳಿಗೆ ಸಭೆ, ಉತ್ಪನ್ನ ಮಾರಾಟ, ಪಂಚಾಯತ್‌ ಕಚೇರಿ ಮತ್ತು ಗೋದಾಮಿಗೆ ಉಪಯೋಗವಾಗಲಿದೆ.

ಬಜಪೆ ಗ್ರಾ.ಪಂ. ಅಧ್ಯಕ್ಷೆ ರೋಜಿ ಮಥಾಯಸ್‌, ಕರಾವಳಿ ಪ್ರಾಧಿಕಾರಿ ಸದಸ್ಯ ಸಾಹುಲ್‌ ಹಮೀದ್‌, ಗ್ರಾ.ಪಂ. ಉಪಾಧ್ಯಕ್ಷ ಮಹಮದ್‌ ಶರೀಫ್‌, ಸದಸ್ಯರಾದ ಸುರೇಂದ್ರ ಪೆರ್ಗಡೆ, ನಝೀರ್‌, ಮಾಜಿ ಸದಸ್ಯ ಮಹಮ್ಮದ್‌ ಅಶ್ರಫ್‌, ಮಹಮದ್‌ ಹನೀಫ್‌, ಮಹಮದ್‌ ಸಿದ್ದಿಕ್‌ ಉಪಸ್ಥಿತರಿದ್ದರು. ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಸಾಯೀಶ್‌ ಚೌಟ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next