Advertisement
ಬೆಳಗಿನ ಜಾವ 6 ಗಂಟೆಯ ಸುಮಾರಿಗೆ ನಾವು ಮಂಗಳೂರು ತಲುಪಿದ್ದೇವೆ. ಎಲ್ಲರೂ ಸೀಟಿನ ಬೆಲ್ಟನ್ನು ಕಟ್ಟಿಕೊಳ್ಳಿ ಎಂದು ವಿಮಾನದಲ್ಲಿ ಅನೌನ್ಸ್ ಮೆಂಟ್ ಆಯಿತು. ನಾನು ವಿಮಾನದ 19(ಎ) ಸೀಟಿನಲ್ಲಿ ಕುಳಿತಿದ್ದೆ. ಬೆಲ್ಟನ್ನು ಕಟ್ಟಿಕೊಂಡು ಸುಮಾರು 15 ನಿಮಿಷಗಳಾಗಿತ್ತು 6.15ರ ಹೊತ್ತಿಗೆ ನಮ್ಮವಿಮಾನದ ಎದುರಿನ ಟಯರ್ ಭೂಸ್ಪರ್ಶವಾದ ಅನುಭವವಾಯಿತು ಕೆಲವೇ ಸೆಕೆಂಡುಗಳಲ್ಲಿ ವಿಮಾನ ಒಂದೇ ಬದಿಗೆ ಜಾರಿದ ಅನುಭವ ಮತ್ತು ಸ್ಫೋಟದ ಸದ್ದು ಕೇಳಿತು ವಿಮಾನ ದಲ್ಲಿದ್ದ ಸಹಪ್ರಯಾಣಿಕರು ಬೊಬ್ಬೆ ಹಾಕಲು ಪ್ರಾರಂಭಿಸಿದರು. ನನ್ನ ಎದುರುಗಡೆಯ ಸೀಟಿನ ಕಡೆ ವಿಮಾನ ಇಬ್ಭಾಗವಾಯಿತು.
ತಲುಪಿದ್ದರು. ಬಳಿಕ ಸ್ಥಳೀಯರ ಸಹಕಾರದಿಂದ ನನ್ನ ತಮ್ಮನಿಗೆ ಫೋನ್ ಕರೆ ಮಾಡಿ ನಾನಿದ್ದ ಸ್ಥಳಕ್ಕೆ ಕರೆಸಿಕೊಂಡೆ, ಬಳಿಕ ನನ್ನನ್ನು ದೇರಳಕಟ್ಟೆಯ ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆ ನೀಡಿದರು ಎಂದು ಅಬ್ದುಲ್ಲ ಬದುಕಿ ಉಳಿದ ಘಟನೆಯನ್ನು ವಿವರಿಸಿದರು. ಸಾಮೆತಡ್ಕದ ಇಸ್ಮಾಯಿಲ್ ಹಾಗೂ ಖತೀಜಾ ದಂಪತಿಯ ಪುತ್ರನಾಗಿರುವ ಅಬ್ದುಲ್ಲಾ ಕಳೆದ 6 ವರ್ಷಗಳಿಂದ ದುಬಾೖಯ ಜಬಲ್ ಆಲಿಯ ಇಬೂ° ಬಕ್ರೂತ ಮಾಲ್ನಲ್ಲಿರುವ ಸ್ಕಾಟ್ಲ್ಯಾಂಡ್ ನ್ಪೋರ್ಟ್ಸ್ ಅಂಗಡಿಯಲ್ಲಿ ಸ್ಟಾಕ್ ಮೆನೇಜರ್ ಆಗಿ ಕೆಲಸ ಮಾಡುತ್ತಿದ್ದರು. 5ತಿಂಗಳ ಹಿಂದೆ ರಜಾ ಸಮಯದಲ್ಲಿ ಊರಿಗೆ ಬಂದಿದ್ದ ಅವರು ಬಲಭುಜದ ನೋವಿಗಾಗಿ ನಿಟ್ಟೆಯ ಕೆ.ಎಸ್. ಹೆಗ್ಡೆ ಆಸ್ಪತ್ರೆಯ ಡಾ| ಸಾಮಗ ಅವರಿಂದ ಚಿಕಿತ್ಸೆ ಪಡೆಯಲೆಂದು 10 ದಿನದ ವೈದ್ಯಕೀಯ ರಜೆಯಲ್ಲಿ ಊರಿಗೆ ಹೊರಟಿದ್ದರು. ಶುಕ್ರವಾರ ರಾತ್ರಿ ದೇರಾ ದುಬಾೖಯಲ್ಲಿರುವ ತನ್ನ ರೂಮಿನಿಂದ ಹೊರಟು 10.30ಕ್ಕೆ ಏರ್ಪೋರ್ಟು ತಲುಪಿದ್ದರು. ರಾತ್ರಿ
11 ಗಂಟೆಗೆ ಇಮಿಗ್ರೇಷನ್ ಮುಗಿಸಿ ರಾತ್ರಿ 1ಗಂಟೆ (ಭಾರತೀಯ ಕಾಲಮಾನ 2.30) ಹೊತ್ತಿಗೆ ವಿಮಾನದಲ್ಲಿ ಹೊರಟು ಮಂಗಳೂರಿಗೆ ತಲುಪಿದಾಗ ಈ ದುರ್ಘಟನೆ ಸಂಭವಿಸಿತ್ತು.
Related Articles
Advertisement
ವಿಶ್ರಾಂತಿಗೆ ಫೋನ್ ಕರೆ ಅಡ್ಡಿವಿಮಾನ ಅಪಘಾತದಿಂದ ಪಾರಾಗಿ ಬಳಲಿದ್ದ ಅಬ್ದುಲ್ಲಾ ಅವರಿಗೆ ಘಟನೆ ನಡೆದ ಬಳಿಕ ಮಧ್ಯಾಹ್ನದ ವರೆಗೆ ಇವರ ರೋಚಕ ಅನುಭವವನ್ನು ಕೇಳಿಕೊಂಡು ಸ್ಥಳೀಯ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ವಾಹಿನಿಗಳಿಂದ ಮತ್ತು ಸಂಬಂಧಿಕರಿಂದ ಗೆಳೆಯರಿಂದ ನಿರಂತರ ಸಾವಿರಾರು ಕರೆಗಳು ಬಂದಿದ್ದು, ಆಯಾಸದ ನಡುವೆಯೂ ಎಲ್ಲರಿಗೂ ಘಟನೆಯ ವಿವರವನ್ನು ನೀಡುತ್ತಿದ್ದರು.
(ಹತ್ತು ವರ್ಷದ ಹಿಂದೆ ಉದಯವಾಣಿ ದೈನಿಕದಲ್ಲಿ ಪ್ರಕಟವಾದ ವರದಿ)