Advertisement

Theerthahalli: ಗೋ ಸಾಗಾಟ ತಡೆದ ಭಜರಂಗದಳ ಕಾರ್ಯಕರ್ತರು

10:40 AM Jul 22, 2023 | Kavyashree |

ತೀರ್ಥಹಳ್ಳಿ: ತಾಲೂಕಿನ ಹೆಗ್ಗೋಡಿನಲ್ಲಿನ ಮನೆಗಳಿಂದ ಹಸುಗಳನ್ನು ಕದ್ದು ಸಾಗಾಟ ಮಾಡುತ್ತಿರುವ ವಿಷಯ ತಿಳಿದು ಭಜರಂಗದಳ ಕಾರ್ಯಕರ್ತರು ಅದನ್ನು ತಡೆದಿರುವ ಘಟನೆ ಜು.22ರ ಶನಿವಾರ ಮುಂಜಾನೆ ಸುಮಾರು 2 ಗಂಟೆಗೆ ನಡೆದಿದೆ.

Advertisement

10 ಕ್ಕೂ ಹೆಚ್ಚು ಹಸುಗಳನ್ನು ಕದ್ದು ಶಿವಮೊಗ್ಗದ ಕಸಾಯಿಖಾನೆಗೆ ಕರೆದೊಯ್ಯಲಾಗುತ್ತಿದೆ ಎನ್ನಲಾಗುತ್ತಿದ್ದ ವಿಷಯ ತಿಳಿದ ಭಜರಂಗದಳದ ಹಲವು ಕಾರ್ಯಕರ್ತರು ಸೇರಿ ಮಿಂಚಿನ ಕಾರ್ಯಾಚರಣೆ ನಡೆಸಿ 10 ಕ್ಕೂ ಹೆಚ್ಚು ಜಾನುವಾರುಗಳನ್ನು ರಕ್ಷಣೆ ಮಾಡಿದ್ದಾರೆ.

ಮಣಿ, ದರ್ಶನ್, ಆಕಾಶ್, ಕೀರ್ತಿ ಸೇರಿ ಹಲವರು ಕಾರ್ಯಕರ್ತರು ಕಾರ್ಯಾಚರಣೆಯಲ್ಲಿದ್ದರು. ವಾಹನದಲ್ಲಿ ಶಿವಮೊಗ್ಗದ ಇಬ್ಬರು ಅನ್ಯಕೋಮಿನ ವ್ಯಕ್ತಿಗಳಿದ್ದು, ಇಬ್ಬರನ್ನೂ ತೀರ್ಥಹಳ್ಳಿ ಪೊಲೀಸರ ವಶಕ್ಕೆ ಕೊಡಲಾಗಿದೆ.

ತೀರ್ಥಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next