Advertisement

Arrested: ಜಾಮೀನಿನಲ್ಲಿ ಬಿಡುಗಡೆಗೊಂಡ ಯುವಕನ ಸಾವು ಕೊಲೆ: ಮೂವರ ಬಂಧನ

06:57 PM Mar 07, 2024 | Team Udayavani |

ಮಂಜೇಶ್ವರ: ಪೊಲೀಸರು ಬಂಧಿಸಿದ ಬಳಿಕ ಜಾಮೀನಿನಲ್ಲಿ ಬಿಡುಗಡೆಗೊಂಡ ಯುವಕನ ಸಾವು ಕೊಲೆಯೆಂದು ದೃಢಪಟ್ಟಿದೆ. ಈ ಸಂಬಂಧ ಆತನ ಸಹೋದರಿಯ ಪತಿ ಸಹಿತ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಆರು ಮಂದಿಗಾಗಿ ಶೋಧ ನಡೆಸುತ್ತಿದ್ದಾರೆ.

Advertisement

ಮೀಯಪದವು ಮದಕ್ಕಳದ ದಿ| ಅಬ್ದುಲ್ಲ ಅವರ ಪುತ್ರ ಮೊದೀನ್‌ ಆರಿಫ್‌(22) ಮೃತಪಟ್ಟಿರುವ ಯುವಕ. ಕುಂಜತ್ತೂರಿನ ಇಶಾìದ್‌ ಮಂಜಿಲ್‌ನ ಅಬ್ದುಲ್‌ ರಶೀದ್‌ (28), ಮಂಜೇಶ್ವರ ಕಣ್ವತೀರ್ಥದ ಸಿದ್ದಿಕ್‌ ಅಲಿ, ಶೌಕತ್‌ ಅಲಿಯನ್ನು ಮಂಜೇಶ್ವರ ಪೊಲೀಸರು ಬಂಧಿಸಿದ್ದಾರೆ.

ಪರಿಯಾರಂ ಮೆಡಿಕಲ್‌ ಕಾಲೇಜು ಆಸ್ಪತ್ರೆಯಲ್ಲಿ ನಡೆಸಿದ ಸಮಗ್ರ ಮರಣೋತ್ತರ ಪರೀಕ್ಷೆಯಲ್ಲಿ ಮೊದೀನ್‌ ಆರಿಫ್‌ ಸಾವಿಗೆ ಗಂಭೀರ ಹಲ್ಲೆಯ ಗಾಯಗಳು ಕಾರಣ ಎಂದು ತಿಳಿದು ಬಂದಿತ್ತು.

ಕಳೆದ ರವಿವಾರ ರಾತ್ರಿ ಗಾಂಜಾ ಸೇವಿಸಿ ಬೊಬ್ಬೆ ಹಾಕುತ್ತಿದ್ದಾನೆಂದು ಕೆಲವರು ನೀಡಿದ ದೂರಿನ ಹಿನ್ನೆಲೆಯಲ್ಲಿ ಮಂಜೇಶ್ವರ ಪೊಲೀಸರು ಮೊದೀನ್‌ ಆರಿಫ್‌ನನ್ನು ವಶಕ್ಕೆ ತೆಗೆದುಕೊಂಡಿದ್ದರು. ಬಳಿಕ ಅಬ್ದುಲ್‌ ರಶೀದ್‌ (ಇದೀಗ ಬಂಧಿತನಾಗಿರುವಾತ) ಠಾಣೆಗೆ ಬಂದು ಮೊದೀನ್‌ ಆರಿಫ್‌ನನ್ನು ಜಾಮೀನಿನಲ್ಲಿ ಬಿಡುಗಡೆಗೊಳಿಸಿ ಕರೆದೊಯ್ದಿದ್ದನು. ಸೋಮವಾರ ಬೆಳಗ್ಗೆ ಮನೆಯಲ್ಲಿ ಮೊದೀನ್‌ ಆರಿಫ್‌ ರಕ್ತವಾಂತಿ ಮಾಡಿ ತೀವ್ರ ಅಸ್ವಸ್ಥಗೊಂಡಿದ್ದನು. ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿದ್ದರೂ ರಕ್ಷಿಸಲು ಸಾಧ್ಯವಾಗಲಿಲ್ಲ. ತೂಮಿನಾಡು ಮೈದಾನಕ್ಕೆ ಕೊಂಡೊಯ್ದು ಅಲ್ಲಿದ್ದ ತಂಡ ಹಲ್ಲೆ ಮಾಡಿತ್ತು ಎಂದು ತನಿಖೆಯಿಂದ ತಿಳಿದು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next