Advertisement

ಸ್ಫೋಟ ಆರೋಪಿಗಳಿಗೆ ಜಾಮೀನು

01:23 AM Jun 15, 2019 | Team Udayavani |
ಮುಂಬಯಿ: ಮಾಲೆಗಾಂವ್‌ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳಿಗೆ ಬಾಂಬೆ ಹೈಕೋರ್ಟ್‌ ಶುಕ್ರವಾರ ಜಾಮೀನು ನೀಡಿದೆ. ಮನೋಹರ್‌ ನವಾರಿಯಾ, ರಾಜೇಂದ್ರ ಚೌಧರಿ, ಧನ್‌ ಸಿಂಗ್‌ ಹಾಗೂ ಲೋಕೇಶ್‌ ಶರ್ಮಾಗೆ ಜಾಮೀನು ನೀಡಲಾಗಿದ್ದು, ಈ ಪೈಕಿ ಲೋಕೇಶ್‌ ಹಾಗೂ ಸಿಂಗ್‌ 2008ರ ಮಾಲೆಗಾಂವ್‌ ಸ್ಫೋಟ ಪ್ರಕರಣದಲ್ಲೂ 3 ವರ್ಷಗಳ ಹಿಂದೆ ಆರೋಪಮುಕ್ತರಾಗಿದ್ದರು.

ಮಾಲೆಗಾಂವ್‌ ಸ್ಫೋಟ ಪ್ರಕರಣವನ್ನು ಸದ್ಯ ಎನ್‌ಐಎ ತನಿಖೆ ನಡೆಸುತ್ತಿದೆ. ನಾಲ್ವರೂ ತಲಾ 50 ಸಾವಿರ ರೂ. ಠೇವಣಿ ಇಡಬೇಕು ಮತ್ತು ವಿಚಾರಣೆಗೆ ಹಾಜ ರಾಗಬೇಕು ಎಂಬ ಷರತ್ತು ವಿಧಿಸಲಾಗಿದೆ. 2006 ಸೆ.8 ರಂದು ನಡೆದಿದ್ದ ಬಾಂಬ್‌ ಸ್ಫೋಟದಲ್ಲಿ 31 ಜನ ಸಾವನ್ನಪ್ಪಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next