Advertisement

ಆರ್ಯನ್ ಖಾನ್ ಗೆ ಜಾಮೀನು ನೀಡಿದ ಹೈಕೋರ್ಟ್: ಇಂದೂ ಜೈಲಿನಲ್ಲಿರಬೇಕು

05:27 PM Oct 28, 2021 | Team Udayavani |

ಮುಂಬಯಿ: ಕ್ರೂಸ್ ಶಿಪ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿ ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ ಗೆ ಬಾಂಬೆ ಹೈಕೋರ್ಟ್ ಗುರುವಾರ ಜಾಮೀನು ನೀಡಿದೆ.

Advertisement

ಹೈಕೋರ್ಟ್ ನ ಏಕ ಸದಸ್ಯ ಪೀಠದಿಂದ ಜಾಮೀನು ಮಂಜೂರು ಮಾಡಿದ್ದು, ಆದೇಶದ ಪ್ರತಿ ಇನ್ನೂ ಕೈಗೆ ಸಿಗದ ಕಾರಣ ಆರ್ಯನ್ ಇಂದೂ ಜೈಲಿನಲ್ಲೇ ಉಳಿಯಬೇಕಾಗಿದೆ.

ಪ್ರಕರಣದ ಇನ್ನಿಬ್ಬರು ಆರೋಪಿಗಳಾದ ಅರ್ಬಾಜ್ ಮರ್ಚೆಂಟ್, ಮುನ್ಮುನ್ ಧಮೇಚಾ ಅವರಿಗೂ ಕೋರ್ಟ್ ಜಾಮೀನು ಮಂಜೂರು ಮಾಡಿದ್ದು, ಷರತ್ತುಗಳೊಂದಿಗೆ ಆದೇಶ ಪತ್ರ ಶುಕ್ರವಾರ ಲಭ್ಯವಾಗಲಿದೆ.

”ಎಲ್ಲಾ ಮೂರು ಮನವಿಗಳನ್ನು ಅನುಮತಿಸಲಾಗಿದ್ದು, ನಾಳೆ ಸಂಜೆಯೊಳಗೆ ನಾನು ವಿವರವಾದ ಆದೇಶಗಳನ್ನು ನೀಡುತ್ತೇನೆ”ಎಂದು ನ್ಯಾಯಮೂರ್ತಿ ಎನ್.ಡಬ್ಲ್ಯೂ.ಸಾಂಬ್ರೆ ಹೇಳಿದ್ದಾರೆ.

ಆರ್ಯನ್ ಖಾನ್ ಪರ ಹಿರಿಯ ವಕೀಲ ಮುಕುಲ್ ರೋಹಟಗಿ ಮತ್ತು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಪರ ಎಎಸ್‌ಜಿ ಅನಿಲ್ ಸಿಂಗ್ ಅವರು ವಾದ ಮಂಡಿಸಿದರು.

Advertisement

”3 ದಿನಗಳ ಕಾಲ ವಾದ ಆಲಿಸಿದ ನಂತರ ಆರ್ಯನ್ ಖಾನ್, ಅರ್ಬಾಜ್ ಮರ್ಚೆಂಟ್, ಮುನ್ಮುನ್ ಧಮೇಚಾ ಅವರಿಗೆ ಬಾಂಬೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ. ವಿವರವಾದ ಆದೇಶವನ್ನು ನಾಳೆ ನೀಡಲಾಗುವುದು. ನಾಳೆ ಅಥವಾ ಶನಿವಾರದ ವೇಳೆಗೆ ಅವರೆಲ್ಲರೂ ಜೈಲಿನಿಂದ ಹೊರಬರುವ ವಿಶ್ವಾಸವಿದೆ” ಎಂದು ಮಾಜಿ ಅಡ್ವೋಕೇಟ್ ಜನರಲ್ ಮುಕುಲ್ ರೋಹಟಗಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.

ಬಿಡುಗಡೆ ಪ್ರಕ್ರಿಯೆಗಳು ಪೂರ್ಣಗೊಂಡರೆ ಆರ್ಯನ್ ಗೆ ನಾಳೆ ಜೈಲಿನಿಂದ ಬಿಡುಗಡೆಯಾಗುವ ಭಾಗ್ಯ ಸಿಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next