Advertisement

ಬೈಕಂಪಾಡಿ: ಚರಂಡಿ ಬದಲು “ಖೆಡ್ಡಾ’!

01:50 AM Jun 15, 2020 | Sriram |

ಬೈಕಂಪಾಡಿ: ಚಿತ್ರಾಪುರದ ಸಿಂಡಿಕೇಟ್‌ ಬ್ಯಾಂಕ್‌ ಸಮೀಪ ಹೆದ್ದಾರಿ ಇಲಾಖೆಯು ಮಳೆ ನೀರು ಹರಿಯಲೆಂದು ಜೆಸಿಬಿ ಮೂಲಕ ಅಲ್ಲಲ್ಲಿ ಅಗೆದು ಹಾಕಿದ್ದು, ಅದೀಗ ಪಾದಚಾರಿಗಳಿಗೆ ಮಾರಕವಾಗಿ ಪರಿಣಮಿಸಿದೆ.

Advertisement

ಚರಂಡಿ ತೋಡಲು ಹೊರಟ ಇಲಾಖೆಯು ಕಾಮಗಾರಿಯನ್ನು ಅರ್ಧಕ್ಕೆ ನಿಲ್ಲಿಸಿದೆ. ಪಕ್ಕದಲ್ಲೇ ತೆಗೆದು ಹಾಕಿದ್ದ ಮಣ್ಣು ಮಳೆನೀರಿನೊಂದಿಗೆ ಮತ್ತೆ ಹೊಂಡ ಸೇರಿದ್ದು, ಅದರ ಆಳದ ಅರಿವಿಲ್ಲದೆ ಕಾಲಿಡುವ ಜನರ ಕಾಲುಗಳು ಕೆಸರಿನಲ್ಲಿ ಹೂತು ಹೋಗುತ್ತಿವೆ.

ಸಮೀಪದಲ್ಲೇ ಬ್ಯಾಂಕ್‌ ಎಟಿಎಂ ಇದ್ದು ಹಣ ತೆಗೆಯಲು ಬರುವವರು ನೀರು ನಿಂತ ಹೊಂಡಕ್ಕೆ ಬಿದ್ದು ಕೈ ಕಾಲು ನೋಯಿಸಿಕೊಂಡದ್ದೂ ಇದೆ. ಇನ್ನೊಂದೆಡೆ ಮಾರ್ಬಲ್‌ ಕಂಪೆನಿಯೊಂದು ಇಂಟರ್‌ ಲಾಕ್‌ ಅಳವಡಿಸಿರುವ ಕಾರಣ ನೀರು ಹರಿಯದೆ ಸಮಸ್ಯೆ ಉದ್ಭವವಾಗಿದೆ. ತತ್‌ಕ್ಷಣ ಈ ಬಗ್ಗೆ ಇಲಾಖೆ ಅಥವಾ ಪಾಲಿಕೆ ಸೂಕ್ತ ತುರ್ತು ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next