Advertisement

ಬಹ್ರೈನ್‌: ಕನ್ನಡ ಭವನ’ಕ್ಕೆ ಅನುದಾನ ಒದಗಿಸುವಂತೆ ಸಿಎಂಗೆ ಮನವಿ 

09:34 AM May 06, 2017 | Team Udayavani |

ಬಹ್ರೈನ್‌ : ಕೊಲ್ಲಿ ರಾಷ್ಟ್ರಗಳಲ್ಲಿಯೇ ಪ್ರಥಮ ಎನಿಸಿದ ಅನಿವಾಸಿ ಕನ್ನಡಿಗರ ಒಕ್ಕೂಟದ ಯುಎಇ ಶಾಖೆಯ ಉದ್ಘಾಟನೆಗೆ ದುಬಾೖಯ ದೂತಾವಾಸಕ್ಕೆ ಆಗಮಿಸಿದ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಬಹ್ರೈನ್‌ ಕನ್ನಡ ಸಂಘದ ಅಧ್ಯಕ್ಷ ಪ್ರದೀಪ ಶೆಟ್ಟಿ, ಕಾರ್ಯದರ್ಶಿ ಕಿರಣ್‌ ಉಪಾಧ್ಯಾಯ ಮತ್ತು ಇತರ ಸದಸ್ಯರು ಭೇಟಿ ಮಾಡಿ ಬಹ್ರೈನ್‌ ಕನ್ನಡಿಗರ ಕನಸಾದ “ಕನ್ನಡ ಭವನ’ಕ್ಕೆ ಅನುದಾನ ಒದಗಿಸುವಂತೆ ಮನವಿ ಮಾಡಿದರು.

Advertisement

ಅನಿವಾಸಿ ಕನ್ನಡಿಗರ ಒಕ್ಕೂಟದ ಸಂಸ್ಥಾಪಕ ಅಧ್ಯಕ್ಷ ಪ್ರವೀಣ್‌ ಶೆಟ್ಟಿ ವಕ್ವಾಡಿ, ಗೌರವಾಧ್ಯಕ್ಷ ಬಿ.ಆರ್‌. ಶೆಟ್ಟಿ, ಕಾರ್ಯದರ್ಶಿ ಪ್ರಭಾಕರ ಮೊದಲಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next