Advertisement

ಬಾಗೇಗೌಡ ಪ್ರಚಾರ ಬಿರುಸು

12:54 PM May 09, 2018 | Team Udayavani |

ಬೆಂಗಳೂರು: ಬಸವನಗುಡಿ ವಿಧಾನಸಭಾ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ಬಾಗೇಗೌಡ ಮತಯಾಚನೆ ಚುರುಕುಗೊಳಿಸಿದ್ದು, ಮಂಗಳವಾರ ಗಿರಿನಗರ ಹಾಗೂ ಸುತ್ತಮುತ್ತಲಿನ ಭಾಗಗಳಲಿ ಬಿರುಸಿನ ಮತಯಾಚನೆ ನಡೆಸಿದರು.

Advertisement

ಗಿರಿನಗರ ವಿಶ್ವಭಾರತಿ ಬಡಾವಣೆಯ ಸಮಸ್ಯೆಗಳ ಕುರಿತಾಗಿ ಸಾರ್ವಜನಿಕ ಮನವಿ ಸ್ವೀಕರಿಸಿದ ಬಾಗೇಗೌಡ ಅವರು, ಈ  ಸಮಸ್ಯೆ ಹಲವು ವರ್ಷಗಳಿಂದ ಬಾಕಿ ಉಳಿದುಕೊಂಡಿದೆ. ತಾವು ಮತನೀಡಿ ಶಾಸಕನಾಗಿ  ಕಾರ್ಯನಿರ್ವಹಿಸಲು ಅವಕಾಶ ಮಾಡಿಕೊಟ್ಟರೆ, ನಿಯಮಾನುಸಾರವಾಗಿ ಸಮಸ್ಯೆಗಳನ್ನು  ಬಗೆಹರಿಸುವುದಾಗಿ ಭರವಸೆ ನೀಡಿದರು.

ಜತೆಗೆ 4 ತಿಂಗಳ ಹಿಂದೆ ಬಿಡಿಎ ಅಧಿಕಾರಗಳು 2 ಮತ್ತು 3ನೇ ಹಂತದ ಕೆಲವು ನಿವೇಶನದಾರರಿಗೆ ನಿವೇಶನ ತೆರವುಗೊಳಿಸುವಂತೆ ನೋಟಿಸ್‌ ನೀಡಿರುವುದು ಗಮನಕ್ಕೆ ಬಂದಿದ್ದು, ಚುನಾವಣೆಯ ನಂತರ ಸಮಸ್ಯೆ ಬಗೆಹರಿಸಲು ಪ್ರಾಮಾಣಿಕವಾಗಿ ಪ್ರಯತ್ನ ಮಾಡುವುದಾಗಿ ತಿಳಿಸಿದರು.

ಕ್ಷೇತ್ರದ ಅಭಿವೃದ್ಧಿಯ ದೃಷ್ಟಿಯಿಂದ ಈ ಬಾರಿ ತಮ್ಮ ಪರ ಮತ ಚಲಾಯಿಸಿ ಗೆಲ್ಲಿಸುವಂತೆ ಮನವಿ ಮಾಡಿದರು. ಮತಯಾಚನೆ ವೇಳೆ ಬಾಗೇಗೌಡ ಅವರಿಗೆ ಬಸವನಗುಡಿ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಎಂ ರಾಜು, ಕಾರ್ಯದರ್ಶಿ ಸಿದ್ದೇಗೌಡ, ವಾರ್ಡ್‌ ಅಧ್ಯಕ್ಷ ಹನುಮಂತೇಗೌಡರು ಹಾಗೂ ಸಾಮಾಜಿಕ ಹೋರಾಟಗಾರ ಅನಿಲ್‌ ಕುಮಾರ್‌ ಸಾಥ್‌ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next