Advertisement

Bagalakote: ಖ್ಯಾತ ಉದ್ಯಮಿ ರತನ್ ಟಾಟಾ ಅಗಲಿಕೆ ಬಹಳ ಆಘಾತ ತಂದಿದೆ : ಡಾ.ನಿರಾಣಿ

09:01 AM Oct 10, 2024 | Team Udayavani |

ಬಾಗಲಕೋಟೆ : ದೇಶ ಹಾಗೂ ಜಗತ್ತು ಕಂಡ ವಿಶೇಷ ಹಾಗೂ ಖ್ಯಾತ ಉದ್ಯಮಿ ರತನ್ ಟಾಟಾ ಅಗಲಿಕೆ‌‌ ಬಹಳ ಆಘಾತ ತಂದೊಡ್ಡಿದೆ ಎಂದು ಮಾಜಿ ಸಚಿವ, ಉದ್ಯಮಿಯೂ ಆಗಿರುವ ಬಿಜೆಪಿ ರಾಜ್ಯ ಉಪಾಧ್ಯಕ್ಷ ಡಾ.ಮುರುಗೇಶ್ ನಿರಾಣಿ ಸಂತಾಪ ವ್ಯಕ್ತಪಡಿಸಿದ್ದಾರೆ.

Advertisement

ದೇಶದ ದೊಡ್ಡ ಉದ್ಯಮಿಗಳಲ್ಲಿ ಅತಿ ವಿಶೇಷವಾದ ಉದ್ಯಮಿ ರತನ್ ಟಾಟಾ, ಪದ್ಮವಿಭೂಷಣ ಪುರಸ್ಕೃತರು, ಭಾರತವನ್ನು ಇಡೀ ಜಗತ್ತು ತಿರುಗಿ ನೋಡುವಂತೆ ‌ಮಾಡಿದ ಮಹಾನ್ ಉದ್ಯಮಿ. ಅವರ ಅಗಲಿಕೆ ಉದ್ಯಮ ರಂಗದ ಕೊಂಡಿ ಕಳಚಿದಂತೆ ಆಗಿದೆ. ರತನ್ ಟಾಟಾ ಅವರ ನಿಧನ ದೇಶಕ್ಕೆ ಬಾರಿ ನಷ್ಟವಾಗಿದೆ. ಬಹಳಷ್ಟು ದೂರದೃಷ್ಟಿ ಉದ್ಯಮಿ,ಕೇವಲ ಒಂದು ಲಕ್ಷದಲ್ಲಿ ನ್ಯಾನೊ ಕಾರು ಲೋಕಾರ್ಪಣೆ ಮಾಡಿ‌ ದಾಖಲೆ ಮಾಡಿದವರು ಎಂದು ತಿಳಿಸಿದ್ದಾರೆ.

ಜಾಗತಿಕ ಉದ್ಯಮದ ಬಾರಿ ಸವಾಲುಗಳ‌ ಮಧ್ಯೆ ಟಾಟಾ ಸಮೂಹ ಸಂಸ್ಥೆಯನ್ನು ಎತ್ತರೆತ್ತರಕ್ಕೆ ಬೆಳೆಸಿ ಟಾಟಾ ಕಂಪನಿಯಿಂದಲೇ‌ ದೇಶವನ್ನು ಇತರೆ ರಾಷ್ಟ್ರದವರು ಗುರುತಿಸುವಂತೆ ಮಾಡಿದವರು. ಸರಳತೆ ಬಹುಪಾಲು ಲಾಭವನ್ನು ದಾನ ಮಾಡಿ ಆಸರೆ ಹಸ್ತ ಚಾಚಿದವರು ಶ್ರೀಮಾನ್ ರತನ್ ಟಾಟಾ ಅವರು, ನಾನು ಒಬ್ಬ ಉದ್ಯಮಿಯಾಗಲು ಅವರ ಜೀವನ ಪ್ರೇರಣೆಯಾಗಿತ್ತು ಎಂದು ಹೇಳಿದ್ದಾರೆ.

ಅವರ ನಿಧನ ಬಹಳ ದುಃಖ ತಂದೊಡ್ಡಿದೆ.ಅವರ ಆತ್ಮಕ್ಕೆ ಶಾಂತಿ‌ ಸಿಗಲಿ.ಅವರ ಜೀವನ ಸದಾ ಎಲ್ಲರಿಗೂ ಸ್ಪೂರ್ತಿದಾಯಕವಾಗಿರಲಿದೆ ಎಂದಿದ್ದಾರೆ.

ಇದನ್ನೂ ಓದಿ: Haryana Election: ಹರಿಯಾಣ ಬಿಜೆಪಿ ಗೆಲುವಿಗೆ ಶ್ರಮಿಸಿದ ವಾರ್‌ರೂಂನ “ತ್ರಿಶಕ್ತಿ’ ನಾಯಕರು!

Advertisement
Advertisement

Udayavani is now on Telegram. Click here to join our channel and stay updated with the latest news.

Next