Advertisement

Badlapur ಪೊಲೀಸ್ ರಿವಾಲ್ವರ್ ಕಸಿದು ಗುಂಡು ಹಾರಿಸಿದ ರೇ*ಪ್ ಆರೋಪಿ!!

11:57 PM Sep 23, 2024 | Team Udayavani |

ಮುಂಬಯಿ: ಮುಂಬಯಿ ಸಮೀಪದ ಬದ್ಲಾಪುರದಲ್ಲಿ ಇಬ್ಬರು ನರ್ಸರಿ ಶಾಲಾ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಆರೋಪಿ ಅಕ್ಷಯ್‌ ಶಿಂಧೆ ಸೋಮ ವಾರ ಪೊಲೀಸ್‌ ವಾಹನದೊಳಗೆ ಪೊಲೀಸರ ಬಂದೂಕನ್ನೇ ಕಸಿದು ಗುಂಡಿನ ದಾಳಿ ನಡೆಸಿದ್ದಾನೆ.

Advertisement

ಈ ವೇಳೆ ಆತ್ಮರಕ್ಷಣೆಗಾಗಿ ಪೊಲೀಸರು ನಡೆಸಿದ ದಾಳಿಯಲ್ಲಿ ಆರೋಪಿ ಮೃತಪಟ್ಟಿದ್ದಾನೆ. ಶಿಂಧೆ ವಿರುದ್ಧ ಅವನ ಮೊದಲ ಪತ್ನಿ ದಾಖಲಿಸಿದ್ದ ಅತ್ಯಾಚಾರ ಮತ್ತು ಹಲ್ಲೆ ಪ್ರಕರಣದ ವಿಚಾರಣೆಗಾಗಿ ಆತ ನನ್ನು ತಲೋಜಾ ಜೈಲಿನಿಂದ ಕೋರ್ಟ್‌ಗೆ ಕರೆದೊಯ್ಯಲಾ ಗು ತ್ತಿತ್ತು. ಈ ವೇಳೆ ಪೊಲೀಸ್‌ ವಾಹನದಲ್ಲೇ ಅವರ ಬಂದೂಕು ಕಸಿದು ಹಲವು ಸುತ್ತಿನ ಗುಂಡಿನ ದಾಳಿ ನಡೆಸಿದ್ದಾನೆ. ಆಗ ಆತ್ಮರಕ್ಷಣೆಗೆ ಪೊಲೀಸರು ಗುಂಡಿಟ್ಟಿದ್ದಾರೆ.  ಗಂಭೀರವಾಗಿ ಗಾಯಗೊಂಡಿದ್ದ ಶಿಂಧೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಥಾಣೆಯ ಬದ್ಲಾಪುರದ ಶಾಲೆಯೊಂದರ ಶೌಚಾಲಯದೊಳಗೆ ಇಬ್ಬರು ಅಪ್ರಾಪ್ತ ವಯಸ್ಕ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿ, ಶಾಲೆಯೊಂದರಲ್ಲಿ ಸ್ವಚ್ಛತಾ ಸಿಬಂದಿಯಾಗಿ ಕೆಲಸ ಮಾಡುತ್ತಿದ್ದ 23 ವರ್ಷದ ಅಕ್ಷಯ್ ಶಿಂಧೆಯನ್ನು ಪೊಲೀಸರು ಆಗಸ್ಟ್ 17 ರಂದು ಬಂಧಿಸಿದ್ದರು. ಕೃತ್ಯದ ವಿರುದ್ಧ ಭಾರೀ ಪ್ರತಿಭಟನೆಗಳು ನಡೆದಿದ್ದವು.

Advertisement

Udayavani is now on Telegram. Click here to join our channel and stay updated with the latest news.

Next