Advertisement

ಬದಿಯಡ್ಕ ಮಂಡಲ ಕಾಂಗ್ರೆಸ್ ನೇತೃತ್ವದಲ್ಲಿ ಪೆಟ್ರೋಲ್ ಪಂಪ್ ಮುಂಭಾಗದಲ್ಲಿ ಧರಣಿ

01:31 PM Jun 11, 2021 | Team Udayavani |

ಬದಿಯಡ್ಕ: ಬದಿಯಡ್ಕ ಮಂಡಲ ಕಾಂಗ್ರೆಸ್ ನೇತೃತ್ವದಲ್ಲಿ  ಪೆಟ್ರೋಲ್ ಬೆಲೆಯೇರಿಕೆ ವಿರುದ್ಧ ಧರಣಿ ಸತ್ಯಾಗ್ರಹ ನಡೆಯಿತು,

Advertisement

ಧರಣಿ ಸತ್ಯಾಗ್ರಹವನ್ನು ಉದ್ಘಾಟಿಸಿ ಮಾತನಾಡಿದ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಹಿರಿಯ ನೇತಾರ ಪಿಜಿ ಚಂದ್ರಹಾಸ ರೈ ಕೊರೋನದ ಸಂದಿಗ್ಧ ಪರಿಸ್ಥಿತಿಯಲ್ಲಿ ಪೆಟ್ರೋಲ್ ಡೀಸೆಲ್ ಬೆಲೆ ದಿನನಿತ್ಯ ಹೆಚ್ಚು ಮಾಡಿ, ಗಲ್ಫ್ ರಾಷ್ಟ್ರದಲ್ಲಿ ಪೆಟ್ರೋಲ್ ಡೀಸೆಲ್ ಕಡಿಮೆ ಬೆಲೆಗೆ ಸಿಗುವಾಗ ಭಾರತದಲ್ಲಿ  ಜನಸಾಮಾನ್ಯರಿಗೆ ಹೆಚ್ಚು ತೆರಿಗೆ ವಿಧಿಸಿ ತೆರಿಗೆ ಹಣದಿಂದ ನರೇಂದ್ರ ಮೋದಿ ಸರಕಾರವನ್ನು ನಡೆಸುತ್ತಿದ್ದಾರೆ ವ್ಯಂಗ್ಯವಾಡಿದರು.

ಕಾಂಗ್ರೆಸ್ ಸರಕಾರ ಇರುವಾಗ ಪ್ರಧಾನಿ ಮನಮೋಹನ್ ಸಿಂಗ್ ರವರು ಡಾಲರ್ ಲೆಕ್ಕದಲ್ಲಿ ಪೆಟ್ರೋಲ್-ಡೀಸೆಲ್ ಬೆಲೆ ಜಾಸ್ತಿ ಇದ್ದರು ಭಾರತದಲ್ಲಿ ಜನಸಾಮಾನ್ಯರಿಗೆ ತೊಂದರೆಯಾಗದ ರೀತಿಯಲ್ಲಿ ನೋಡಿಕೊಂಡರು ಎಂದರು.

ಬದಿಯಡ್ಕ ಮಂಡಲ ಅಧ್ಯಕ್ಷ  ನಾರಾಯಣ ಮಣಿಯಾಣಿ ಅಧ್ಯಕ್ಷತೆ ವಹಿಸಿದ್ದರು, ಮಂಡಲ್ ಉಪಾಧ್ಯಕ್ಷ ಜಗನ್ನಾಥ ರೈ, ಪಂಚಾಯತ್ ಉಪಾಧ್ಯಕ್ಷ  ಎಂ ಅಬ್ಬಾಸ್, ಕುಂಜಾರು ಮೊಹಮ್ಮದ್ ಹಾಜಿ, ಖಾದರ್ ಮಾನ್ಯ ಮಾತನಾಡಿದರು, ಪದಾಧಿಕಾರಿಗಳಾದ ಕುಮಾರ ನಾಯರ್, ಮ್ಯಾಥ್ಯೂಸ್, ನವೀನ ರೈ, ಶಾಫಿ, ನೇತೃತ್ವ ನೀಡಿದರು, ಶ್ಯಾಮ್ ಪ್ರಸಾದ್ ಮಾನ್ಯ ಸ್ವಾಗತಿಸಿ  ಶಾಫಿ ಗೂಳಿಯ ಡಿ, ವಂದಿಸಿದರು

Advertisement

Udayavani is now on Telegram. Click here to join our channel and stay updated with the latest news.

Next