Advertisement

ಬಾದಾಮಿ:ಅಧಿಕಾರಿಗಳ ದಾಳಿ;ಹಣ ಬಿಟ್ಟು ಹಂಚುತ್ತಿದ್ದವರು ಪರಾರಿ!

04:18 PM May 11, 2018 | |

ಬಾದಾಮಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಬಿಜೆಪಿ ಸಂಸದ ಶ್ರೀರಾಮುಲು ಸ್ಪರ್ಧಿಸಿರುವ ಬಾದಾಮಿ ಕ್ಷೇತ್ರದಲ್ಲಿ ಮತದಾರರಿಗೆ ಮತದಾನದ ಮುನ್ನಾ ದಿನ ಹಣ ಹಂಚುವ ಕಾರ್ಯ ಜೋರಾಗಿದ್ದು, ಅಧಿಕಾರಿಗಳ ದಾಳಿ ವೇಳೆ ಹಣ ಹಂಚುತ್ತಿದ್ದವರು ದಿಕ್ಕಾಪಾಲಾಗಿ ಓಡಿದ್ದಾರೆ. 

Advertisement

ಹೊಸೂರು ಎಂಬಲ್ಲಿ ಫ್ಲೈಯಿಂಗ್‌ ಸ್ಕ್ವಾಡ್‌ ಅಧಿಕಾರಿಗಳು ಖಚಿತ ಮಾಹಿತಿಯ ಮೇರೆಗೆ ದಾಳಿ  ನಡೆಸಿ  2.96 ಲಕ್ಷ ನಗದು ಜಪ್ತಿ ಮಾಡಿದ್ದಾರೆ.

ಹಣ ಹಂಚುತ್ತಿದ್ದವರು ಅಧಿಕಾರಿಗಳನ್ನು ಕಂಡೊಡನೆ ಹಣವನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾರೆ. 

ಪತ್ತೆಯಾದ ಹಣದಲ್ಲಿ 500 , 200, 100 ಮತ್ತು 20 ರೂಪಾಯಿ ನೋಟುಗಳ ಕಟ್ಟುಗಳು ಪತ್ತೆಯಾಗಿವೆ. 

ಮುದ್ದೇಬಿಹಾಳದಲ್ಲಿ 15 ಲಕ್ಷ ಜಪ್ತಿ 

Advertisement

ವಿಜಯನಗರದ ಮುದ್ದೇಬಿಹಾಳದಲ್ಲಿ ದಾಖಲೆಯಿಲ್ಲದ 15 ಲಕ್ಷ ರೂಪಾಯಿ ಹಣ ಪತ್ತೆಯಾಗಿದ. ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ. 

ಕೂಡ್ಲಿಗಿಯಲ್ಲಿ 27 ಲಕ್ಷ ರೂ ಜಪ್ತಿ 

ಬಳ್ಳಾರಿಯ ಕೂಡ್ಲಿಗಿಯಲ್ಲಿ  ಜಿಲ್ಲಾಧಿಕಾರಿ ನೇತೃತ್ವದಲ್ಲಿ ನಡೆದ ದಾಳಿಯಲ್ಲಿ  27 ಲಕ್ಷ ರೂಪಾಯಿ ಹಣ ಜಪ್ತಿ ಮಾಡಲಾಗಿದ್ದು, ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ. ಬಂಧಿತರ ಬಳಿ ಬಿಜೆಪಿ ಬಾವುಟ, ಕರಪತ್ರಗಳು ಪತ್ತೆಯಾಗಿವೆ. ಇನ್ನಿಬ್ಬರು ಸ್ಥಳದಿಂದ ಪರಾರಿಯಾಗಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next