Advertisement

ಬಾದಾಮಿ: ಸಾರ್ವಜನಿಕರಿಂದ ಅಹವಾಲು ಸ್ವೀಕಾರ

12:06 PM Jun 29, 2019 | Suhan S |

ಬಾದಾಮಿ: ಇಲ್ಲಿನ ರಾಮದುರ್ಗ ರಸ್ತೆಯ ಶಾಸಕರ ಗೃಹ ಕಚೇರಿಯಲ್ಲಿ ಮಾಜಿ ಸಿಎಂ, ಶಾಸಕ ಸಿದ್ದರಾಮಯ್ಯನವರು ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಿದರು.

Advertisement

ತಾಲೂಕಿನ ಕೆರೂರ, ಗುಳೇದಗುಡ್ಡ, ಕುಳಗೇರಿ ಸೇರಿದಂತೆ ವಿವಿಧ ಗ್ರಾಮೀಣ ಭಾಗಗಳಿಂದ ಬಂದಂತಹ ಮಹಿಳೆಯರು, ಯುವಕರು, ವೃದ್ಧರು ತಮ್ಮ ಸಮಸ್ಯೆಗಳ ಮನವಿಯನ್ನು ಸಲ್ಲಿಸಿದರು. ವಸತಿ, ಉದ್ಯೋಗ, ರಸ್ತೆ, ಸಾರಿಗೆ ಸಂಪರ್ಕ, ಗ್ರಾಮೀಣ ಉದ್ಯೋಗ ಖಾತರಿ ಯೋಜನೆ, ವರ್ಗಾವಣೆ, ಕುಡಿಯುವ ನೀರು ಸೇರಿದಂತೆ ವಿವಿದ ಸಮಸ್ಯೆಗಳ ಮನವಿಯನ್ನು ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಸಿಎಂ, ಶಾಸಕ ಸಿದ್ದರಾಮಯ್ಯ ಕೆಲವು ಸಮಸ್ಯೆಗಳನ್ನು ಸಂಬಂಧಿಸಿದ ಅಧಿಕಾರಿಗಳಿಗೆ ದೂರವಾಣಿ ಮೂಲಕ ಸಂಪರ್ಕಿಸಿ ಪರಿಹರಿಸಲು ಸೂಚಿಸಿದರು. ಈ ಸಂದರ್ಭದಲ್ಲಿ ಮಾಜಿ ಶಾಸಕ ಬಿ.ಬಿ. ಚಿಮ್ಮನಕಟ್ಟಿ, ಮುಖಂಡರಾದ ಎಂ.ಬಿ. ಹಂಗರಗಿ, ಡಾ.ಎಂ.ಜಿ. ಕಿತ್ತಲಿ, ಎಂ.ಡಿ. ಎಲಿಗಾರ, ಹೊಳಬಸು ಶೆಟ್ಟರ, ಮಹೇಶ ಹೊಸಗೌಡ್ರ, ಮಹಾಂತೇಶ ಹಟ್ಟಿ, ರಾಜಮಹಮ್ಮದ ಬಾಗವಾನ, ಎಸ್‌. ಡಿ. ಜೋಗಿನ, ಪಿ.ಆರ್‌.ಗೌಡರ, ಮಧು ಯಡ್ರಾಮಿ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next