Advertisement

ಪಂಜಾಬ್ ನಲ್ಲಿ ಕಾಂಗ್ರೆಸ್ ಬದಲಾಗಿ ಬಾದಲ್ ರಿಂದ ಆಡಳಿತ : ನವಜೋತ್‌ ಸಿಂಗ್‌ ಸಿಧು ಆರೋಪ

10:20 PM May 09, 2021 | Team Udayavani |

ಚಂಡೀಗಢ: ಪಂಜಾಬ್‌ನಲ್ಲಿ ಅಮರಿಂದರ್‌ ಸಿಂಗ್‌ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಆಡಳಿತ ನಡೆಸುತ್ತಿಲ್ಲ. ಬದಲಾಗಿ ಶಿರೋಮಣಿ ಅಕಾಲಿದಳ ಮುಖಂಡ ಪ್ರಕಾಶ್‌ ಸಿಂಗ್‌ ಬಾದಲ್‌ ಆಡಳಿತ ನಡೆಸುತ್ತಿದ್ದಾರೆ. ಹೀಗೆಂದು ಮಾಜಿ ಸಚಿವ ನವಜೋತ್‌ ಸಿಂಗ್‌ ಸಿಧು ಆರೋಪಿಸಿದ್ದಾರೆ.

Advertisement

ಅಮೃತಸರದ ಶಾಸಕರೂ ಆಗಿರುವ ಅವರು, ಬಾದಲ್‌ ಮಾತನ್ನೇ ಅಧಿಕಾರಿಗಳು, ಪೊಲೀಸರು ಕೇಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಈ ಬಗ್ಗೆ ಟ್ವೀಟ್‌ ಮಾಡಿರುವ ಅವರು, ಸರ್ಕಾರ ಜನರ ಅಭಿವೃದ್ಧಿಗಾಗಿ ಆಡಳಿತ ನಡೆಸುತ್ತಿಲ್ಲ. 75-25 ಅನುಪಾತದಲ್ಲಿ ಮಾಫಿಯಾ ರಾಜ್‌ ಪಂಜಾಬ್‌ನಲ್ಲಿ ಮುಂದುವರಿಯುತ್ತಿದೆ ಎಂದು ಬರೆದುಕೊಂಡಿದ್ದಾರೆ. 2015ರ ಕೋಟಕ್‌ಪುರದಲ್ಲಿ ನಡೆದ ಪೊಲೀಸ್‌ ಶೂಟೌಟ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ನೀಡಿದ ಹೈಕೋರ್ಟ್‌ ನೀಡಿದ ತೀರ್ಪು ರಾಜ್ಯ ಸರ್ಕಾರ ಅಸಮರ್ಥತೆಗೆ ಹಿಡಿದ ಕೈಗನ್ನಡಿ ಎಂದು ಅವರು ದೂರಿದ್ದಾರೆ.

ಇದನ್ನೂ ಓದಿ: ಗೋವಾ: ಗ್ರಾಹಕರಿಗೆ ಬೆಲೆಯಲ್ಲೂ ಖಾರವಾದ ಕೆಂಪು ಖಾರದ ಮೆಣಸು; ಕೆ.ಜಿ ಗೆ 1200 ರೂ.

Advertisement

Udayavani is now on Telegram. Click here to join our channel and stay updated with the latest news.

Next