Advertisement

ಗ್ರಹಣದಿಂದ ಕೆಟ್ಟ ಪರಿಣಾಮಗಳು;ಎಚ್ಚರಿಕೆ ವಹಿಸಿ: ಬಿಎಸ್‌ವೈ ಸಲಹೆ 

01:37 PM Jul 18, 2018 | Team Udayavani |

ಶಿವಮೊಗ್ಗ: ಜುಲೈ 27 ರಂದು ಸಂಭವಿಸುವ ಗ್ರಹಣದಿಂದ ಕೆಟ್ಟ ಪರಿಣಾಮಗಳು ಸಂಭವಿಸುವ ಬಗ್ಗೆ ಎಚ್ಚರಿಕೆ ನೀಡಲಾಗಿದೆ. ರಾಜ್ಯದ ಜನರೂ ಈ ಬಗ್ಗೆ ಎಚ್ಚರಿಕೆ ವಹಿಸಬೇಕಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ  ಸಲಹೆ ನೀಡಿದ್ದಾರೆ. 

Advertisement

ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು ಗ್ರಹಣದ ಕುರಿತು ಎಚ್ಚರಿಕೆ ವಹಿಸಿ. ಕೆಟ್ಟ ಪರಿಣಾಮಗಳಾಗದಂತೆ ದೇವರನ್ನು  ಪ್ರಾರ್ಥಿಸುವುದೊಂದೆ ದಾರಿ. ಯಾರೂ ಗ್ರಹಣದ ದಿನ ಶುಭ ಕಾರ್ಯಗಳನ್ನು ಮಾಡಬೇಡಿ ಎಂದರು. 

ನಾನು ಗ್ರಹಣ ಕಳೆದ ಬಳಿಕ ರಾಜ್ಯ ಪ್ರವಾಸ ಮಾಡಿ ಜನರ ಸಮಸ್ಯೆ ಆಲಿಸುತ್ತೇನೆ ಎಂದು ತಿಳಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next