Advertisement

Nagamangala ಗಲಭೆಯ ಹಿನ್ನೆಲೆ ಗೊತ್ತಾಗಬೇಕು: ಸಿ.ಎನ್‌. ಅಶ್ವತ್ಥನಾರಾಯಣ

11:29 PM Sep 16, 2024 | Team Udayavani |

ನಾಗಮಂಗಲ: ನಾಗಮಂಗಲದಲ್ಲಿ ನಡೆದಿರುವ ಗಲಭೆಯ ಹಿಂದೆ ಯಾವುದೋ ಹಿನ್ನೆಲೆ ಇದ್ದು, ಇದರ ಸತ್ಯಾಸತ್ಯತೆ ಹೊರಬರಬೇಕೆಂದು ಮಾಜಿ ಉಪ ಮುಖ್ಯಮಂತ್ರಿ ಡಾ| ಸಿ.ಎನ್‌. ಅಶ್ವತ್ಥ ನಾರಾಯಣ ಆಗ್ರಹಿಸಿದರು.

Advertisement

ನಾಗಮಂಗಲದ ಗಲಭೆಪೀಡಿತ ಪ್ರದೇಶ ಹಾಗೂ ಬದ್ರಿಕೊಪ್ಪಲುವಿಗೆ ಬಿಜೆಪಿಯ ಸತ್ಯಶೋಧನ ಸಮಿತಿ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿ ಅನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗಲಭೆಯ ಆಳ-ಅಗಲ ತಿಳಿಯುವ ಕೆಲಸ ಮಾಡಬೇಕು. ಇದನ್ನುಸಂಪೂರ್ಣವಾಗಿ ಅರಿಯಲು ಸತ್ಯಶೋಧನ ಸಮಿತಿ ರಚಿಸಿದ್ದೇವೆ. ಮಾಜಿ ಸಚಿವ ಕೆ.ಸಿ. ನಾರಾಯಣ ಗೌಡ, ನಿವೃತ್ತ ಐಪಿಎಸ್‌ ಅಧಿಕಾರಿ ಭಾಸ್ಕರ್‌ ರಾವ್‌ ಸೇರಿ ಮತ್ತಿತರರು ಬಂದು ಪರಿಶೀಲನೆ ಮಾಡುತ್ತಿದ್ದೇವೆ. ಘಟನೆ ಬಗ್ಗೆ ಸ್ಥಳೀಯರಿಂದ ಮಾಹಿತಿ ಸಂಗ್ರಹಿಸಿದ್ದು, ಘಟನೆ ಹಿಂದಿರುವ ಕಾಣದ ಕೈಗಳ ಪತ್ತೆ ಮಾಡಬೇಕು ಎಂದರು.

ಕೇರಳದ ಇಬ್ಬರು ಗಲಭೆಯಲ್ಲಿ ಭಾಗಿಯಾಗಿದ್ದಾರೆ. ಅವರು ಇಲ್ಲಿಗೆ ಯಾಕೆ ಬಂದರು ಎಲ್ಲದರ ಬಗ್ಗೆ ತನಿಖೆ ಆಗಬೇಕು. ಗಣೇಶನನ್ನೇ ಬಂಧಿಸುತ್ತಾರೆ ಅಂದರೆ ಅವರ ಮನಸ್ಥಿತಿ ಹೇಗಿದೆ? ಇದರ ಬಗ್ಗೆ ಒಂದು ವರದಿ ತಯಾರು ಮಾಡಿ ನಮ್ಮ ಪಕ್ಷದ ವೇದಿಕೆಯಲ್ಲಿ ಇಡುತ್ತೇವೆ. ಬಳಿಕ ಸರಕಾರಕ್ಕೂ ವರದಿ ಕೊಡುತ್ತೇವೆ ಎಂದರು. ಇಲ್ಲಿ ಮಾದಕ ವಸ್ತು ಸೇರಿ ಬೇರೆಬೇರೆಯ ಚಟುವಟಿಕೆ ನಡೆಯುತ್ತಿದೆ. ಎಲ್ಲವನ್ನೂ ಪತ್ತೆಹಚ್ಚುವ ಕೆಲಸ ಆಗಬೇಕು ಎಂದು ಆಗ್ರಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next