Advertisement

ಮಹಾರಾಷ್ಟ್ರ, ಅಸ್ಸಾಂನಲ್ಲಿ ಕಾಂಗ್ರೆಸ್‌ಗೆ ಹಿನ್ನಡೆ

01:15 AM Mar 14, 2019 | |

ಹೊಸದಿಲ್ಲಿ: ಗುಜರಾತ್‌, ಮಹಾರಾಷ್ಟ್ರ, ತೆಲಂಗಾಣ ರಾಜ್ಯಗಳಲ್ಲಿ ಕಾಂಗ್ರೆಸ್‌ ನಾಯಕರು ಪಕ್ಷದಿಂದ ಹೊರನಡೆಯುತ್ತಿರುವಂತೆಯೇ ಅಸ್ಸಾಂನಲ್ಲಿ ಮಾಜಿ ಸಚಿವ  ಗೌತಮ್‌ ರಾಯ್‌ ಹಾಗೂ ಮಾಜಿ ಸಂಸದ ಕಿರಿಪ್‌ ಚಲಿಹಾ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ್ದು ಬಿಜೆಪಿ ಸೇರಲಿದ್ದಾರೆ.

Advertisement

ರಾಯ್‌ ಸಿಲ್ಚಾರ್‌ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಲಿದ್ದಾರೆ ಎನ್ನಲಾಗಿದೆ. ಮಹಾರಾಷ್ಟ್ರದಲ್ಲಿ ಕಾಂಗ್ರೆಸ್‌ನಿಂದ ಏಳು ಬಾರಿ ಶಾಸಕ, ವಾಡಾಲಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ಕಾಳಿದಾಸ್‌ ಕೊಲಂಭRರ್‌ ಬಿಜೆಪಿ ಸೇರ್ಪಡೆಗೊಳ್ಳುವುದಾಗಿ ಬುಧವಾರ ಪ್ರಕಟಿಸಿದ್ದಾರೆ. ಮಹಾರಾಷ್ಟ್ರದ ವಿಪಕ್ಷ ನಾಯಕ  ರಾಧಾಕೃಷ್ಣ ವಿಖೆ ಪಾಟೀಲ್‌ ಪುತ್ರ ಸುಜಯ್‌ ವಿಖೆ ಪಾಟೀಲ್‌ ಮಂಗಳವಾರ ಬಿಜೆಪಿ ಸೇರಿದ್ದರು.  

ಇಂದು ಕಾಸರಗೋಡಿಗೆ ರಾಹುಲ್‌
ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಮಾ.14ರಂದು ಕೇರಳದಲ್ಲಿ ಕಾಂಗ್ರೆಸ್‌ ಪರ ಪ್ರಚಾರ ಶುರು ಮಾಡಲಿದ್ದಾರೆ. ಮೊದಲಿಗೆ ಅವರು ಕಲ್ಲಿಕೋಟೆಯಲ್ಲಿ  ಸಾರ್ವಜನಿಕ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ತ್ರಿಶ್ಶೂರ್‌ನ ತ್ರಿಪ್ರಯಾರ್‌ನಲ್ಲಿ “ಮೀನುಗಾರರ ಸಂಸತ್‌ನಲ್ಲಿ ಭಾಗವಹಿಸಲಿ ದ್ದಾರೆ. ಬಳಿಕ ಕಾಸರಗೋಡು ಜಿಲ್ಲೆಗೆ ತೆರಳಿ ಹತ್ಯೆಗೀಡಾದ ಯುವ ಕಾಂಗ್ರೆಸ್‌ ಕಾರ್ಯಕರ್ತರಾದ ಕೃಪೇಶ್‌, ಶರತ್‌ಲಾಲ್‌ರ ಕುಟುಂಬ ಸದಸ್ಯರನ್ನು ಭೇಟಿಯಾಗಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next