Advertisement

ಅಹ್ಮದ್‌ ಪಟೇಲ್‌ಗೆ ಹಿನ್ನಡೆ

12:30 AM Jan 04, 2019 | Team Udayavani |

ಹೊಸದಿಲ್ಲಿ: ಕಾಂಗ್ರೆಸ್‌ ನಾಯಕ ಹಾಗೂ ರಾಜ್ಯಸಭಾ ಸದಸ್ಯ ಅಹ್ಮದ್‌ ಪಟೇಲ್‌ಗೆ ಬಿಜೆಪಿ ನಾಯಕ ಬಲವಂತ ಸಿಂಗ್‌ ರಜಪೂತ್‌ ಸಲ್ಲಿಸಿರುವ ಮೊಕದ್ದಮೆ ಎದುರಿಸುವಂತೆ ಸುಪ್ರೀಂ ಕೋರ್ಟ್‌ ಗುರುವಾರ ಸೂಚಿಸಿದೆ. 2017ರಲ್ಲಿ ಗುಜರಾತ್‌ನಿಂದ ರಾಜ್ಯಸಭೆಗೆ ನಡೆದಿದ್ದ ಹೈವೋಲ್ಟೆಜ್‌ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಬಲವಂತ ಸಿಂಗ್‌ ರಜಪೂತ್‌ ವಿರುದ್ಧ ಅಹ್ಮದ್‌ ಪಟೇಲ್‌ ಗೆದ್ದಿದ್ದರು. ಈ ಆಯ್ಕೆ ಪ್ರಶ್ನಿಸಿ ರಜಪೂತ್‌ ನ್ಯಾಯಾಂಗ ಸಮರ ಆರಂಭಿಸಿದ್ದರು. 2018 ಅ. 26ರಂದು ಗುಜರಾತ್‌ ಹೈಕೋರ್ಟ್‌ ಈ ಬಗ್ಗೆ ತನಿಖೆ ನಡೆಯಬೇಕು ಎಂದು ಆದೇಶಿಸಿದ್ದನ್ನು ಪ್ರಶ್ನಿಸಿ ಅಹ್ಮದ್‌ ಪಟೇಲ್‌ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಮಾನ್ಯ ಮಾಡಲು ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೊಯ್‌ ಮತ್ತು ನ್ಯಾ| ಎಸ್‌.ಕೆ. ಕೌಲ್‌ ನೇತೃತ್ವದ ನ್ಯಾಯಪೀಠ ನಿರಾಕರಿಸಿ ತನಿಖೆ ಮುಂದುವರಿಯಲಿ ಎಂದು ಸೂಚಿಸಿದೆ.
 

Advertisement
Advertisement

Udayavani is now on Telegram. Click here to join our channel and stay updated with the latest news.

Next