Advertisement

ಜೀವ ಬೆದರಿಕೆ ಆರೋಪ : ಬಚ್ಚಾಖಾನ್ ನ್ಯಾಯಾಲಯಕ್ಕೆ ಹಾಜರು

01:30 PM Dec 28, 2020 | Suhan S |

ಧಾರವಾಡ: ಮೈಸೂರು ಕಾರಾಗೃಹದಲ್ಲಿದ್ದುಕೊಂಡು ಹುಬ್ಬಳ್ಳಿ ಧಾರವಾಡ ಅವಳಿ ನಗರದ ಉದ್ಯಮಿಗಳು, ವ್ಯಾಪಾರಸ್ಥರಿ­ಗೆ ಹಫ್ತಾ ವಸೂಲಿ ಮತ್ತ ಜೀವ ಬೆದರಿಕೆ ಹಾಕಿದ ಆರೋಪದ ಮೇಲೆ ಬಂಧಿತನಾಗಿರುವ ಭೂಗತ ಪಾತಕಿ ಬಚ್ಚಾಖಾನ್ ನನ್ನು ಧಾರವಾಡ ಪೋಲಿಸರು ಸೋಮವಾರ ನ್ಯಾಯಾಲಯಕ್ಕೆ ಹಾಜರು ಪಡೆಸಿದರು.

Advertisement

ರವಿವಾರ ರಾತ್ರಿಯೇ ಮೈಸೂರುನಿಂದ ಧಾರವಾಡ ಕೇಂದ್ರ ಕಾರಾಗೃಹಕ್ಕೆ ಬಚ್ಚಾಖಾನನ್ನು ತರಲಾಗಿತ್ತು. ಸೋಮವಾರ ಮಧ್ಯಾಹ್ನ ಉಪ ನಗರ ಠಾಣೆ ಪೋಲಿಸರು ಇಲ್ಲಿನ ಪ್ರಧಾನ ಸಿವಿಲ್ ನ್ಯಾಯಾಲಯಕ್ಕೆ ಬಚ್ಚಾಖಾನ್ ನನ್ನು ಹಾಜರು ಪಡಿಸಿದರು.

ಪ್ರೂಟ್ ಇರ್ಪಾನ್ ಕೊಲೆ ಪ್ರಕರಣದ ನಂತರ ಅವಳಿ ನಗರದಲ್ಲಿ ಬಚ್ಚಾಖಾನ್ ಬೆಂಬಲಿಗರ ಹಾವಳಿ ಹೆಚ್ಚಾಗುತ್ತಿದ್ದು ಅಲ್ಲಲ್ಲಿ ಜೀವ ಬೆದರಿಕೆ ಹಫ್ತಾ ವಸೂಲಿ ಪ್ರಕರಣಗಳು ನಡೆಯುತ್ತಿವೆ.

ಇದನ್ನೂ ಓದಿ : ಬೆಳಗಾವಿ ಪಾಲಿಕೆಯ ಎದುರು ಕನ್ನಡ ಧ್ವಜ ಹಾರಿಸಿದ ಹೋರಾಟಗಾರರು

Advertisement

Udayavani is now on Telegram. Click here to join our channel and stay updated with the latest news.

Next