Advertisement

Babaleshwara: ಸ್ಪ್ರೈಟ್ ತುಂಬಿದ್ದ ಲಾರಿ ರಸ್ತೆ ಮಧ್ಯೆಯೇ ಪಲ್ಟಿ: ಸಂಚಾರಕ್ಕೆ ಸಮಸ್ಯೆ

09:08 AM Jun 02, 2024 | keerthan |

ವಿಜಯಪುರ: ಸ್ಪ್ರೈಟ್ ಕಂಪನಿಯ ಪಾನೀಯ ಬಾಟಲಿಗಳನ್ನು ಸಾಗಿಸುತ್ತಿದ್ದ ಲಾರಿ ರಸ್ತೆ ಮಧ್ಯೆಯೇ ಪಲ್ಟಿಯಾಗಿ ಸಂಚಾರ ಅಸ್ತವ್ಯಸ್ತವಾದ ಘಟನೆ ಬಬಲೇಶ್ವರ ತಾಲೂಕಿನಲ್ಲಿ ಜರುಗಿದೆ.

Advertisement

ಭಾನುವಾರ ನಸುಕಿನಲ್ಲಿ ಜಮಖಂಡಿ-ವಿಜಯಪುರ ಮಾರ್ಗವಾಗಿ ಸ್ಪ್ರೈಟ್ ಕಂಪನಿಯ ಪೇಯದ ಬಾಟಲಿಗಳನ್ನು ಸಾಗಿಸುತ್ತಿದ್ದ ಮಹಾರಾಷ್ಟ್ರ ನೋಂದಣಿ ಹೊಂದಿದ್ದ ಲಾರಿ ಬಬಲೇಶ್ವರ ತಾಲೂಕಿನ ಸಾರವಾಡ ಬಳಿ ಬರುತ್ತಿದ್ದಂತೆ ಚಾಲಕನ ನಿಯಂತ್ರಣ ತಪ್ಪಿದೆ.

ಇದರಿಂದಾಗಿ ಲಾರಿ ರಸ್ತೆ ಮಧ್ಯೆಯೇ ಮಗುಚಿ ಬಿದ್ದಿದ್ದು, ಪೇಯದ ಬಾಟಲಿಗಳು ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಅಪಘಾತದಲ್ಲಿ ಚಾಲಕ ಸೇರಿದಂತೆ ಯಾರಿಗೂ ಅಪಾಯವಾಗಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.

ಲಾರಿ ರಸ್ತೆಯಲ್ಲೇ ಬಿದ್ದಿರುವ ಕಾರಣ ಇದೇ ಮಾರ್ಗವಾಗಿ ಸಂಚರಿಸುತ್ತಿದ್ದ ಜನರು ಪೇಯದ ಬಾಟಲಿಗಳನ್ನು ನೋಡಲು ಜಮಾಯಿಸಿದ್ದರಿಂದ ಟ್ರಾಫಿಕ್ ಜಾಮ್ ಉಂಟಾಗಿತ್ತು.

ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಬಬಲೇಶ್ವರ ಠಾಣೆ ಪೊಲೀಸರು ರಸ್ತೆಯಲ್ಲಿ ಬಿದ್ದಿರುವ ಪೇಯದ ಬಾಟಲಿಗಳನ್ನು ಸಾರ್ವಜನಿಕರು ಕದಿಯದಂತೆ ಕಾವಲಿಗೆ ನಿಂತಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next