Advertisement

ಬಿ.ಎ. ಸನದಿ, ಹಂಪನಾಗೆ ಪಂಪ ಪ್ರಶಸ್ತಿ ಪ್ರದಾನ

03:45 AM Feb 19, 2017 | |

ಶಿರಸಿ: ಎಲ್ಲ ಧರ್ಮಗಳಿಗಿಂತ ಕನ್ನಡದ ಧರ್ಮವೇ ದೊಡ್ಡದು ಎಂದು  ಪಂಪ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ| ಹಂ.ಪ.ನಾಗರಾಜಯ್ಯ ಪ್ರತಿಪಾದಿಸಿದರು. 

Advertisement

ಶನಿವಾರ ಬನವಾಸಿಯಲ್ಲಿ ನಡೆದ ಕದಂಬೋತ್ಸವದಲ್ಲಿ ನಾಡಿನ ಪ್ರತಿಷ್ಠಿತ ಪಂಪ ಪ್ರಶಸ್ತಿ, 3 ಲಕ್ಷ ರೂ. ನಗದು, ಫಲಕ ಸ್ವೀಕರಿಸಿ ಮಾತನಾಡಿದರು. ಸಣ್ಣಪುಟ್ಟ ಸಂಗತಿಗಳಿಗೆ ಬೆಂಕಿ ಹಚ್ಚುವ, ಹೊಗೆ ತುಂಬುವ ನಮ್ಮನ್ನು ಹತ್ತಿರ ತರುವ ಸೇತುವೆ ಬೇಕು. ಪಂಪನ ಹೆಸರಿನ ಸನ್ಮಾನ ಖುಷಿ ತಂದಿದೆ  ಎಂದರು.

2013-14ನೇ ಸಾಲಿನ ಪಂಪ ಪ್ರಶಸ್ತಿ ಪುರಸ್ಕೃತ ಬಿ.ಎ. ಸನದಿ ಮಾತನಾಡಿ, ಆದಿಕವಿ ಪಂಪ “ಮನುಷ್ಯ ಜಾತಿ ತಾನೊಂದೇ ವಲಂ’ ಎಂದು ಹಿಂದೆಯೇ ಜಾತ್ಯತೀತ ಬದುಕನ್ನು ಪ್ರಚುರ ಪಡಿಸಿದ್ದಾರೆ. ಕರ್ನಾಟಕ ಸರಕಾರದವರು ಇದನ್ನು ಘೋಷ ವಾಕ್ಯವಾಗಿ ಸ್ವೀಕರಿಸಬೇಕು ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next